ಹೊನ್ನಾವರ : ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಇಆರ್ಎಸ್ಎಸ್ 112 ವಾಹನದ ಮಾಹಿತಿ ಕಾರ್ಯಕ್ರಮ ಶನಿವಾರ ಜರುಗಿತು.
ಪೊಲೀಸ್, ಅಗ್ನಿ ಮತ್ತು ವಿಪತ್ತು ಸೇವೆಗಳಿಗಾಗಿ 24X7 ಸಾರ್ವಜನಿಕರಿಗೆ ಲಭ್ಯವಿರುವ ಇಆರ್ಎಸ್ಎಸ್ 112 ವಾಹನದ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹೊನ್ನಾವರ ಶರಾವತಿ ವೃತ್ತ, ಮಿನಿವಿಧಾನಸೌದ, ತಾಲೂಕ ಆಸ್ಪತ್ರೆ, ಬಂದರು ಪ್ತದೇಶ ಬಸ್ ನಿಲ್ದಾಣ ಹಾಗೂ ಗ್ರಾಮೀಣ ಭಾಗದಲ್ಲಿ 112 ವಾಹನದ ಸೇವೆಯ ಮಾಹಿತಿಯಿರುವ ಕರಪತ್ರಗಳನ್ನು ಅಂಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಒಂದು ಭಾರತ, ಒಂದು ತುರ್ತು ಕರೆ ಸಂಖ್ಯೆ ಪರಿಕಲ್ಪನೆಯಡಿ 112 ಸಹಾಯವಾಣಿ ಆರಂಭಿಸಲಾಗಿದೆ. ಒಂದೇ ನಂಬರ್ ಗೆ ಕರೆ ಮಾಡುವ ಮೂಲಕ ತುರ್ತಾಗಿ ಸಹಾಯವನ್ನು ಪಡೆಯಬಹುದಾಗಿದೆ.ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡಲಿದೆ.
ಡಿಜಿಟಲ್ ತಂತ್ರಜ್ಞಾನದ ಮೂಲಕ ಕರೆ ಮಾಡಿದವರು ಇರುವ ಭೇಟಿ ನೀಡಿ, ಸ್ಥಳದ ವಿವರಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನೂ ಸಹಾಯವಾಣಿ ಕೇಂದ್ರದಲ್ಲಿ ಮಾಡಲಾಗಿದೆ ಎಂದು ಹೊನ್ನಾವರ ಪೊಲೀಸ್ ಠಾಣೆಯ ಸಿಪಿಐ ಶ್ರೀಧರ ಎಸ್.ಆರ್. ಮಾಹಿತಿ ನೀಡಿದರು. ಈ ವಾಹನದ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಪೊಲೀಸ್, ಅಗ್ನಿ ಶಾಮಕ ದಳ, ಸಲ್ಲಿಸಲು ಅವಕಾಶವನ್ನು ಆರೋಗ್ಯ ಮುಂತಾದ ತುರ್ತು ಸೇವೆಗಳನ್ನು ಪಡೆಯಬಹುದು
Leave a Comment