ಭಾರತೀಯ ಜನತಾ ಪಾರ್ಟಿ, ಯುವಮೋರ್ಚಾ ಭಟ್ಕಳ ಮಂಡಳ ವತಿಯಿಂದ “ಯುವ ತಿರಂಗಾ ಯಾತ್ರಾ” ಪ್ರಯುಕ್ತ “ಸೈಕಲ್ ಜಾಥಾ” ಕಾರ್ಯಕ್ರಮವನ್ನು ರವಿವಾರ ಬೆಳಿಗ್ಗೆ ಭಟ್ಕಳದ ಜನಪ್ರಿಯ ಶಾಸಕರಾ ಸುನೀಲ್ ನಾಯ್ಕ ಅವರು ಚಾಲನೆ ನೀಡಿದರು.
ತಾಲೂಕಿನ ಬೈಲೂರ್ ಕ್ರಾಸ್ ನಿಂದ ಆರಂಭಗೊಂಡ ಜಾಥಾ ಮುರ್ಡೇಶ್ವರ , ಶಿರಾಲಿ ಮಾರ್ಗವಾಗಿ, ಭಟ್ಕಳ ಸರ್ಕಲನಿಂದ , ಚೆನ್ನಪಟ್ಟಣ ಹನುಮಂತ ದೇವಸ್ಥಾನ ಮೂಲಕ ಭಟ್ಕಳ ಬೈಪಾಸ್ ಮಾರ್ಗವಾಗಿ ಬಂದು ಪಕ್ಷದ ತಾಲೂಕಾ ಕಾರ್ಯಾಲಯದಲ್ಲಿ ಜಾಥಾವನು ಕೊನೆಗೊಳಿಸಲಾಯಿತು .
ಈ ವೇಳೆ ಶಾಸಕ ಸುನೀಲ ನಾಯ್ಕ ಸೈಕಲ್ ಜಾಥಾದಲ್ಲಿ ಸ್ವತಃ ಸೈಕಲ್ ಚಾಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು
ಈ ಕಾರ್ಯಕ್ರಮಕ್ಕೆ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾದ ರವಿ ನಾಯ್ಕ ಜಾಲಿ, ಜಿಲ್ಲಾ ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ,ಮಂಡಳದ ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕ ದೈಮನೆ ಹಾಗೂ ಮೋಹನ್ ನಾಯ್ಕ,
ಯುವಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಶಬರೀಶ ನಾಯ್ಕ, ಜಿಲ್ಲಾಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಮಂಡಳದ ಪ್ರಭಾರಿಗಳಾದ ಶ್ರೀಧರ ನಾಯ್ಕ ಮಂಕಿ, ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಉದಯ ದೇವಡಿಗ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ನಾಯ್ಕ ಹಾಗೂ ಕಿರಣ ನಾಯ್ಕ , ಯುವ ಮೋರ್ಚಾ ಮಂಡಳದ ಪದಾಧಿಕಾರಿಗಳು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ 45ಕ್ಕೂ ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.
Leave a Comment