ಹೊನ್ನಾವರ : ಮೀನುಗಾರಿಕೆಗೆ ತೆರಳಿದ ಸಂಧರ್ಬದಲ್ಲಿ ಅಲೆಗಳ
ರಭಸಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ
ಹಳದಿಪುರ ಬಸವರಾಜ ದುರ್ಗಾ ಗುಡ್ಡದ ಸಮೀಪ ಶನಿವಾರ ನಡೆದಿದೆ.
ಕುಮಟಾ ತಾಲೂಕಿನ ಕಲ್ಲಬೆಯ ಕಂದವಳ್ಳಿ ನಿವಾಸಿ ಗೋಪಾಲ
ಮಾದೇವ ಗೌಡ (33) ಕಾಣೆ�ಯಾದ ವ್ಯಕ್ತಿ. ಅರಬ್ಬಿ ಸಮುದ್ರದಲ್ಲಿ
ಮೀನುಗಾರಿಕೆ ಮಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಕಾಲುಜಾರಿ ಬಿದ್ದು
ಮುಳುಗಿ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಚಂದ್ರಶೇಖರ
ರಾಮ ಗೌಡ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.
Leave a Comment