ತುಮಕೂರು : ಎಲ್ಲೆಡೆ ಸ್ವಾತಂತ್ರö್ಯ ದಿನಾಚರಣೆ ಸಂಭ್ರಮ ಸಡಗರ ಆದರೆ, ತಾಲೂಕಿನ ಕೋರ ಹೋಬಳಿಯ ಕರಿಕರೆ ಸರ್ಕಾರಿ ಶಾಲೆಯಲ್ಲಿ ಆಸಂಭ್ರಮ ಕಳೆಕಟ್ಟುವ ಮುನ್ನವೇ ನಡೆದ ವಿದ್ಯತ್ ದುರ್ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಕಂಬನಿ ಮಿಡಿತಕ್ಕೆ ಸಾಕ್ಷಿಯಾದರೆ ಘೋಷಕರ ರೋದನ ಮುಗಿಲು ಮುಟ್ಟಿತ್ತು. ಸ್ವಾಂತAತ್ರö್ಯ ದಿನಾಚರಣೆ ಧ್ವಜ ಹಾರಿಸಲು ಕಬ್ಬಿಣದ ಪೈಪ್ ನಡುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಬಾಲಕ ಚಂದನ (16) ಸಾವನ್ನಪ್ಪಿದ. ಸ್ಥಳದಲ್ಲಿದ್ದ ಶಶಾಂಕ್ (16), ಪವನ್ (21) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶಾಲಾ ಆವರಣದಲ್ಲೇ ಹಾದುಹೋಗಿದ್ದ 11 ಕೆವಿ ವಿದ್ಯುತ್ ಮಾರ್ಗಕ್ಕೆ ಧ್ವಜ ಹಾರಿಸಲು ಕಬ್ಬಿಣ ರಾಡ್ ತಗುಲಿ ವಿದ್ಯತ್ ಪ್ರವಹಿಸಿ ಸ್ಥಳದಲ್ಲೇ ಮೂವರೂ ಕುಸಿದು ಬಿದ್ದರು.
ಕೂಡಲೇ ಅವರನ್ನು ಗ್ರಾಮಸ್ಥರು ಶ್ರೀದೇವಿ ವ್ಯದ್ಯಕೀಯ ಮಾಹಾವಿದ್ಯಾಲಯಕ್ಕೆ ರವಾನಿಸಿದರು ಕೊನೆಗಳಿಗೆಯಲ್ಲಿ ಚಂದನ ಆಸುನೀಗಿದ. ಘಟನೆ ಗಮನಕ್ಕೆ ಬಂದ ಕೂಡಲೇ ಹಿರಿಯ ಅಧಿಕಾರಿಗಳು ಶ್ರೀದೇವಿ ಮೆಡಿಕಲ್ ಕಾಲೇಜಿಗೆ ದೌಡಯಿಸಿದರು. ದುರ್ಘಟನೆಗೆ ಸ್ಥಳೀಯವಾಗಿ ಇದ್ದ ಶಿಕ್ಷಕರ ಬೇಜವಾಬ್ದಾರಿ ಕಾರಣ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಕರಿಕೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ 11ಕೆ.ವಿ. ಮಾರ್ಗದ ವಿದ್ಯತ್ ಲೈನ್ಗಳು ಹಾದು ಹೋಗಿದ್ದು, ಆದರೆ ಬದಲಾವಣೆಗೆ ಗ್ರಾಮಸ್ಥರು ಹಲವು ಬಾರಿ ಬೆಸ್ಕಾಂ ಅದಿಕಾರಿಗಳು ಮನವಿ ಮಾಡಿದ್ದರೂ ಅಧಿಕಾರಿಗಳೂ ವಚ್ಚೆತತುಕೊಂಡಿರಲಿಲ್ಲ.
ಶಾಸಕರಿAದ ಸಾಂತ್ವನ : ಘಡನೆ ನಡೆದ ಕೂಡಲೇ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೆಶ್ವರ್ ಆಸ್ಪತ್ರೆಗೆ ಭೇಟಿ ನೀಡಿ ಮೃತನ ಪೋಷಕರಿಗೆ ಸ್ವಾಂತನ ಹೇಳಿದರು. ಸಚಿವರೊಂದಿಗೆ ಮಾತನಾಡಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
Leave a Comment