ಹೊನ್ನಾವರ: ತಾಲೂಕಿನ ಮಂಕಿ ಆಸ್ಪತ್ರೆ ಆವರಣದಲ್ಲಿ ನಂದಿನಿ ಹಾಲಿನ ಪಾರ್ಲರನ್ನು ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಪಿ.ವಿ.ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ ಸೆಪ್ಟೆಂಬರ್ 3ವರೆಗೆ 10% ರಿಯಾಯತಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳು ದೊರೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಗುಣಮಟ್ಟದ ನಂದನಿ ಉತ್ಪನ್ನಗಳು ರಿಯಾಯತಿ ದರದಲ್ಲಿ ಈ ಮಳಿಗೆಯಲ್ಲಿ ದೊರಯಲಿದೆ. ರಾಜ್ಯದಲ್ಲಿ ನಂದನಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಹಾಲು ಖರೀದಿಸಿ ತಯಾರಿಸುತ್ತಿದ್ದು, ಕಲಬೆರಕೆ ರಹಿತವಾಗಿ ಜನಮನ್ನಣೆ ಪಡೆದಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಮಾರುಕಟ್ಟೆ ವಿಭಾಗದ ಅಧಿಕಾರಿಗಳಾದ ಶರಣು ಮೆಣಸಿನಕಾಯಿ, ರಾಜೇಂದ್ರ ಹೊಸಮನಿ, ವಿಸ್ತರಣಾಧಿಕಾರಿಗಳಾದ ನವಿನ ಪೂಜಾರ ಡಾ. ದಿನೇಶ ಆಚಾರಿ ಯಶೋಧರ ನಾಯ್ಕ ಸಾಲ್ಕೋಡ್, ಶ್ರೀಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Leave a Comment