ಹೊನ್ನಾವರ: ಬಸ್ ನಿಲ್ದಾಣ ಸಮೀಪದ ತಹಶೀಲ್ದಾರ ಕಛೇರಿಯ ಹಳೇ ಕಟ್ಟಡದಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ನೂತನ ಕಛೇರಿ ಉದ್ಘಾಟನೆ ನೇರವೇರಿತು.
ಆವರಣದಲ್ಲಿ ತೆಂಗಿನ ಸಸಿ ನಾಟಿ ಮಾಡಿ ನೂತನ ಕಛೇರಿಯನ್ನು ಶಾಸಕರು ಉದ್ಘಾಟಿಸಿದರು. ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕ್ಷೇತ್ರದ ಸಾರ್ವಜನಿಕರಿಗೆ ಅನೂಕೂಲವಾಗಲು ಈ ಕಛೇರಿಯನ್ನು ಆರಂಭಿಸಿದ್ದು, ಪ್ರತಿ ಸೋಮವಾರ ಇಲ್ಲಿಯೇ ಇದ್ದು ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇನೆ. ಪ್ರತಿದಿನ ಈ ಕಛೇರಿಯಲ್ಲಿ ಆಪ್ತ ಕಾರ್ಯದರ್ಶಿ ಇರುವುದರಿಂದ ಅವರಿಂದಲೂ ಸಮಸ್ಯೆ ಬಗ್ಗೆ ತಿಳಿಸಿ ಕೆಲಸ ಮಾಡಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಸೇಪ್ ಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ್ ಜಿ.ಜಿ.ಶಂಕರ, ಸಿಪಿಐ ಶ್ರೀಧರ ಎಸ್.ಆರ್, ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪಿಡ್ಲಬ್ ಡಿ ಅಧಿಕಾರಿಗಳಾದ ಯೋಗಾನಂದ ಎಂ.ಎಸ್.ನಾಯ್ಕ, ಗಣಪತಿ ನಾಯ್ಕ ಬಿಟಿ, ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment