ಬೆಂಗಳೂರು : ಚೆನ್ನೆöÊನಿಂದ ನಗರಕ್ಕೆ ಬಂದ ಇಬ್ಬರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳು 10 ಲಕ್ಷ ರೂ. ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ವಿವಸ್ತçಗೊಳಿಸಿ, ಗಂಜಾ ಸೇವಿಸುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.
ಕೇರಳ ಮೂಲದ ಶ್ಯಾನಿಸ್ ಉಸ್ಮಾರಿ ಕುಟ್ಟಿ (23) ಮೊಹಮದ್ ಶಾಹೀನ್ ಹಮ್ಜಾ (23) ರೋಡೆಗೊಳಗಾದವರು. ಶ್ಯಾನಿಸ್ ಮತ್ತು ಮೊಹಮದ್ ಆ23ರಂದು ಚೆನ್ನೆöÊನಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು. ರಾತ್ರಿ 11.30 ಕ್ಕೆ ಹೊಸೂರು ರಸ್ತೆಯ ಆನೆಪಾಳ್ಯ ಮೋರಿ ಬಳಿ ಬರುತ್ತಿದ್ದಾಗ ಕಾರನ್ನು ಅಡ್ಡಗಟ್ಟಿದ 6 ಮಂದಿ ದುಷ್ಕರ್ಮಿಗಳು ವಿನಾಕಾರಣ ಜಗಳ ಮಾಡಿದ್ದರು.
ಮ್ಯೂಸಿಯಂ ರಸ್ತೆಯಲ್ಲಿ ಬರುತ್ತಿರುವಾಗ ಯುವಕರು ಕಾರನ್ನು ಹಿಂಬಾಲಿಸಿ ಕೊಂಡು ಬಂದ ದುಷ್ಕರ್ಮಿಗಳು ಮತ್ತೆ ಅಡ್ಡಗಟ್ಟಿ, ಇಬ್ಬರನ್ನೂ ಬಲವಂತವಾಗಿ ಕಾರಿನ ಹಿಂಬದಿಯ ಸೀಟಿನಲ್ಲಿ ಕೂರಿಸಿ ಚೂರಿ ತೋರಿಸಿ ಬೆದರಿಸಿದರು.
ನಂತರ ಹೊಸೂರು ರಸ್ತೆ ಕಡೆ ಕರೆದುಕೊಂಡು ಹೀಗಿ ಹಣ ಕೊಡುವಂತೆ ಬೆದರಿಸಿ ಮೊಬೈಲ್ ಕಸಿದುಕೊಂಡಿದ್ದರು. ಯುವಕರ ಮೊಬೈಲ್ನಿಂದ ನೆಟ್ ಬ್ಯಾಂಕಿಗ್ ಮೂಲಕ ತಮ್ಮ ಬ್ಯಾಂಕ್ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ ದುಷ್ಕರ್ಮಿಗಳು, ಬೆಂಗಳೂರು ಹೊರ ವಲಯ ನಿರ್ಜನ ಪ್ರಸೇಶಕ್ಕೆ ಕರೆದೊಯ್ದಿದ್ದರು.
ಅಲ್ಲಿಇಬ್ಬರನ್ನೂ ವಿವಸ್ತçಗೊಳಿಸಿ ಗಾಂಜಾ ಸೇವಿಸುವಂತೆ ಒತ್ತಾಯಿಸಿದ್ದಾರೆ. ಸಾಲದ್ದಕ್ಕೆ ಈ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದು ಆರೋಪಿಗಳು ವಿಕೃತಿ ಮೆರೆದಿದ್ದಾರೆ. ಈ ಕುರಿತು ಕಬ್ಬನ್ಪಾರ್ಕ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳಿಗೆ ಶೋಧ ನಡೆದಿದೆ.
Leave a Comment