ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡುತ್ತಿದ್ದು, ತಾಲೂಕಿನ 1436 ಸಂಘ ಗಳಿಗೆ 2 ಕೋಟಿ 9 ಲಕ್ಷ ಲಾಭಾಂಶ ವನ್ನು ಈ ಬಾರಿ ವಿತರಿಸಲಾಗುತ್ತಿದೆ.
ಸಾಂಕೇತಿಕವಾಗಿ ಹೊನ್ನಾವರ ವಲಯದ ಸಂಘಗಳಿಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸದಸ್ಯರಾದ ಶಿವರಾಜ್ ಮೇಸ್ತ ವಿತರಿಸಿದರು.ನಂತರ ಮಾತನಾಡಿ ಗ್ರಾಮಾಭಿವೃದ್ದಿ ಯೊಜನೆಯ ಕಾರ್ಯಕ್ರಮಗಳು ಅತ್ಯಂತ ಶಿಸ್ತಬದ್ಧವಾಗಿ ಮೂಡಿಬರುತ್ತಿದ್ದು, ಜನರ ಸರ್ವತೋಮುಖ ಅಭಿವೃದ್ಧಿ ದಿಶೆಯಲ್ಲಿ ಕಡಿಮೆ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸುಲಭ ರೀತಿಯ ಸಾಲ ಸೌಲಭ್ಯ ಒದಗಿಸುವ ಜೊತೆಗೆ ಪ್ರೋತ್ಸಾಹದಾಯಕವಾಗಿ ಲಾಭಾಂಶ ವಿತರಿಸುತ್ತಿರುವುದು ಈ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಅಲ್ಲದೇ ಈ ರೀತಿಯ ಸೌಲಭ್ಯಗಳನ್ನು ನೀಡುವ ಏಕೈಕ ಸಂಸ್ಥೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಯೋಜನಾಧಿಕಾರಿ ವಾಸಂತಿ ಅಮೀನ ಸಂಸ್ಥೆಯ ಸೇವಾಕಾರ್ಯಗಳ ಬಗ್ಗೆ ತಿಳಿಸಿ ಇನ್ನಷ್ಟು ಪರಿಣಾಮಕಾರಿ ನಿರ್ವಹಣೆ ಕುರಿತು ಸದಸ್ಯರನ್ನು ಹುರಿದುಂಬಿಸಿದರು. ರಾಜ್ಯದಲ್ಲಿ ಒಟ್ಟು 620 ಕೋಟಿ ಲಾಭಾಂಶ ವಿತರಿಸಲಾಗುತ್ತಿದೆ. ಪ್ರತೀ 3 ವರ್ಷಗಳಿಗೊಮ್ಮೆ ಈ ರೀತಿ ಲಾಭಾಂಶ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಬಂಧಕ ಗೋಪಾಲ, ವಲಯ ಮೇಲ್ವಿಚಾರಕ ನಾಗರಾಜ್.ಕೆ ಸೇವಾಪ್ರತಿನಿಧಿಗಳಾದ ಶ ವಿಕ್ಟೋರಿಯಾ, ಮಂಜುಳಾ,ನಗದು ಸಹಾಯಕ ಉಮೇಶ್ ಹಾಗೂ ಸಂಘದ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Leave a Comment