ಯಲ್ಲಾಪುರ:, ಅಪೌಷ್ಟಿಕತೆಯನ್ನು ಹೋಗಲಾಡಿಸಿ ಮಕ್ಕಳ ಭಾವಿ ಭವಿüಷ್ಯ ಉಜ್ವಲಗೊಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ,ಏನೆ ಸಾಧನೆ ಮಾಡಬೇಕಾದರೂ ಆರೋಗ್ಯವೇ ಮುಖ್ಯ ಎಂಬುದನ್ನರಿತು ಸರಕಾರದ ಪೋಷಣಾ ಅಭಿಯಾನ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳು ಎಲ್ಲಾ ಗ್ರಾಮಪಂಚಾಯತಿ ಮಟ್ಟದಲ್ಲಿ ತಲುಪುವಂತೆ ಮಾಡಬೇಕು. ಎಂದು ತಹಶೀಲ್ದಾರ ಶ್ರೀ ಕೃಷ್ಣ ಕಾಮಕರ ಹೇಳಿದರು.

ಅವರು ಗುರುವಾರ ಸಂಜೆ ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸ್ತಿçà ಶಕ್ತಿ ಭವನ ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟಿçÃಯ ಪೌಷ್ಟಿಕ ಮಾಸಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಮಾತನಾಡಿ ಗರ್ಭಿಣಿಯರನ್ನು ,ಮಕ್ಕಳಿಗೆ ಪೌಷ್ಟಿಕತೆಯ ಕೊರತೆಯಾಗದಂತೆ ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಾತ್ರ ಮಹತ್ವವಾದದ್ದು .ಅದರೊಂದಿಗೆ ಗರ್ಭಿಣಿಯರಿಗೆ ಮಾನಸಿಕ ಹಿಂಸೆ ,ಒತ್ತಡವಾಗದಂತೆ ಕುಟುಂಬದ ಸದಸ್ಯರು ನೋಡಿಕೊಳ್ಳುವದು ಇಂದಿನ ದಿನಗಳಲ್ಲಿ ಬಹಳ ಅಗತ್ಯವಾಗಿದೆ ಎಂದರು.

ಪೌಷ್ಟಿಕ ಆಹಾರ ಮೇಳ ನಡೆಯಿತು
ತಾಪA ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಮಾತನಾಡಿ ಗರ್ಭಿಣಿ ,ಬಾಣಂತಿ ,ಮಕ್ಕಳ ಸುಪೋಷಣೆಗೆ ಬೇಕಾಗುವ ತರಕಾರಿ ಬೆಳೆಸಲು ಪಂಚಾಯತಿ ಮಟ್ಟದಲ್ಲಿ ಕೈತೋಟ ನಿರ್ಮಿಸಲು ಅನುದಾನವಿದ್ದು ಈ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಪೌಷ್ಟಿಕ ಆಹಾರ ಆರೋಗ್ಯದ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ ಹಾಗೂ ನಂದೋಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದ ಡಾ ತೇಜಸ್ ಮಾತನಾಡಿ ಗರ್ಭೀಣಿಯರಲ್ಲಿ ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆಗಳು ಅದಕ್ಕೆ ಪರಿಹಾರ,ಕೋವಿಡ್ ಮುಂಜಾಗರೂಕತೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಮೇಳ ನಡೆಯಿತು. ರೇಣುಕಾ ಬೋವಿ ಪ್ರಾರ್ಥಿಸಿದರು.
ಮಹಿಳಾ ಮತ್ತು ಶಿಶುಅಭಿವೃದ್ಧಿ ಇಲಾಖೆಯ ಅಧಿಕಾರಿ ರಫೀಕಾ ಯಳ್ಳುರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಗೀತಾ ವಂದಿಸಿದರು.
Leave a Comment