ಬೆಂಗಳೂರು : ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ನೆರೆ ಹಾನಿಯಿಂದ ನಷ್ಟದ ಬಗ್ಗೆ ಅಧ್ಯಯನ ಮಡೆಸಲು ಸೆ. 5 ರಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ಸಂಸ್ಥೆಯ ತಂಡಗಳು ರಾಜ್ಯಕ್ಕೆ ಬೇಟಿ ನೀಡಲಿವೆ.
ಸೆಪ್ಟಂಬರ್ 5 ಮತ್ತು 6 ರಂದು ಎರಡು ದಿನ ಎನ್ ಡಿಆರ್ ಎಫ್ ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು. ನೆರೆ ಹಾನಿ ಸಂಭಧ ಅಧ್ಯಯನ ನಡೆಸಲಿವೆ. ಕೇಂದ್ರದ ತಂಡಗಳು ರಾಜ್ಯದ ಕಂದಾಯ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಿವೆ.
ಹಾನಿಯಾದ ಜಿಲ್ಲೆಗಳಿಗೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಲಿವೆ. ಎನ್ ಡಿಆರ್ ಎಫ್ ನ ಮೂರು ತಂಡಗಳು ಆಗಮಿಸಲಿದ್ದು, ಧಾರವಾಡ, ಬೆಳಗವಿ, ಬಾಗಲಕೋಟೆ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಬಗ್ಗೆ ಅಧ್ಯಯನ ನಡೆಸಲಿವೆ.
ಹಾವೇರಿ, ಉತ್ತರಕನ್ನಡ, ಜಿಲ್ಲೆಗಳಿಗೆ ಒಂದು ತಂಡ, ಧಾರವಾಡ, ಬಾಗಲಕೊಟೆಗೆ ಮತ್ತೊಂದು ತಂಡ ಮತ್ತು ಬೆಳಗಾವಿ ಒಂದು ತಂಡ ಪ್ರತ್ಯೇಕವಾಗಿ ಬೇಟಿ ನೀಡಲಿವೆ ಎನ್ನಲಾಗಿದೆ.
Leave a Comment