ಹೊನ್ನಾವರ: ಕರುನಾಡ ವಿಜಯ ಸೇನೆ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ ರಾಜ್ಯ ಮಟ್ಟದ ಆನೈಲ್ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಪ್ರಥಮ ಸ್ಥಾನವನ್ನು ಹೊನ್ನಾವರ ತಾಲೂಕಿನ ಮಂಕಿಯ ವೀರ ಯೋಧ ನಾಗರಾಜ್ ನಾಯ್ಕ್, ಬೆಳಗಾವಿಯ ಕಿತ್ತೂರಿನ ಶಿಕ್ಷಕ ಪ್ರತಾಪ್ ಕುಮಾರ್ ದ್ವೀತಿಯ ಸ್ಥಾನ ಉಡುಪಿಯ ರಕ್ಷಿತಾ ಎಚ್ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದ ಮಂಕಿಯ ನಾಗರಾಜ ನಾಯ್ಕ ಇವರ ಮನೆಗೆ ಕರುನಾಡ ವಿಜಯ ಸೇನೆಯ ಜಿಲ್ಲೆಯ ಪದಾಧಿಕಾರಿಗಳು ತೆರಳಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆ ಜಿಲ್ಲಾ ಅಧ್ಯಕ್ಷ ವಿನಾಯಕ ಆಚಾರಿ, ಹಾಗೂ ಜಿಲ್ಲಾ ವಕ್ತಾರ ಶ್ರೀರಾಮ ಹೊನ್ನಾವರ ಜಿಲ್ಲಾ ಗೌರವಾಧ್ಯಕ್ಷ ವಿನೋದ್ ನಾಯ್ಕ್ ರಾಯಲಕೇರಿ ತಾಲೂಕಾ ಯುವ ಘಟಕ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಯುವ ಘಟಕ ಉಪಾಧ್ಯಕ್ಷ ನಿತಿನ್ ಆಚಾರ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಹುಲ್ ಜಿ ಮೇಸ್ತ, ತಾಲೂಕು ಕಾರ್ಯದರ್ಶಿ ಭಾಸ್ಕರ್ ತಾಂಡೆಲ್ , ತಾಲೂಕು ಯುವ ಘಟಕ ಕಾರ್ಯದರ್ಶಿ ರಾಜಶೇಖರ ಶೇಟ್, ಸಾಮಾಜಿಕ ಜಾಲತಾಣ ವಿನಯ್ ನಾಯ್ಕ್ ಮಂಕಿ ಉಪಸ್ಥಿತಿಯಲ್ಲಿದ್ದರು.

Leave a Comment