ಕಳೆದ 54ವರ್ಷಗಳಿಂದ ನಿರಂತರವಾಗಿ ಗಣಪತಿಯ ಬೆನ್ನುಹತ್ತಿ ವಿಶ್ವವ್ಯಾಪಿಯಾದ ಗಣೇಶನನ್ನು ಕನ್ನಡದಲ್ಲಿ ಪರಿಚಯಿಸಿ, ಶ್ರೀಗಂಧ ಮತ್ತು ಶಿಲೆಯಲ್ಲಿ ಮೂರ್ತಿ ನಿರ್ಮಿಸಿ, ಗಣಪತಿಯ ಕುರಿತು ಹಲವು ಸಂಶೋಧನಾ ಕೃತಿಗಳನ್ನು ಪ್ರಕಟಿಸಿ ನಿರಂತರ ಸಂಚಾರಿಯಾಗಿರುವ ಗೋವರ್ಧನ ಅಂಕೋಲೇಕರ್ ಅವರಿಗೆ ಈಗ 84ವರ್ಷ.
ಗೌಡ ಸಾರಸ್ವತ ಕುಟುಂಬದಲ್ಲಿ ಜನಿಸಿ, ಕುಟುಂಬದ ಅಡಿಕೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಗೋವರ್ಧನ ಅಂಕೋಲೇಕರ್ ಅವರಿಗೆ ಯೌವ್ವನದಲ್ಲೇ ಗಣಪತಿಯ ಹುಚ್ಚು ತಗಲಿತ್ತು. 1973ರಲ್ಲೇ ದೇಶದ ಮತ್ತು ವಿದೇಶದ ಪ್ರಸಿದ್ಧ ಗಣಪತಿಯನ್ನೊಳಗೊಂಡ ವಿಶ್ವವ್ಯಾಪಿ ಗಣೇಶ ಪ್ರಕಟಿಸಿದರು. ಗಣಪತಿಯ ಬಗ್ಗೆ ಅಧ್ಯಯನ ಮಾಡಿ ಬರೆದ ‘ಎಲ್ಲೀಸ್ ಗೆಟ್ಟಿಯಾ ಎಲಿಫಂಟ್ ಫೇಸ್ಡ್ ಗಾಡ್’ ಕೃತಿಯನ್ನಾಧರಿಸಿ ಎಲ್ಲ ವಿವರಗಳನ್ನು ಸಂಗ್ರಹಿಸುತ್ತ ಹೋದರು.
ಗಣಪತಿ ಚಿತ್ರವಿರುವ ಮುಸ್ಲಿಂ ರಾಷ್ಟ್ರ ಇಂಡೋನೇಷಿಯಾದ ನೋಟು ಅವರ ಬಳಿ ಇದೆ. ಚಿತ್ರ, ಕೃತಿ ಪ್ರಕಟಿಸಿ ಆದ ಮೇಲೆ ಗಣಪತಿಯ ಮೂರ್ತಿಯನ್ನು ಗಂಧದಲ್ಲಿ ಕೆತ್ತಿಸಿದರು. ಇವರ ಆಸಕ್ತಿ ಕಂಡು ರಾಮಕೃಷ್ಣ ಹೆಗಡೆಯವರು 7ರೂಪಾಯಿ ಕೆಜಿಗೆ ಗಂಧ ಕೊಡಿಸಿದ್ದರು. ಗಣಪತ್ಯುಪನಿಷದ್ವಿಜ್ಞಾನ, ಕಡಲಾಚೆಯ ಗಣೇಶ ಕೃತಿಗಳನ್ನು ಪ್ರಕಟಿಸಿದರು.
Leave a Comment