ಯಲ್ಲಾಪುರ : ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಈ ಬಾರಿ ತಾಲೂಕಿನಲ್ಲಿ ೫ ದಿನ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದ್ದು, ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸುವ ಸಂಘಟಕರು ಕಡ್ಡಾಯವಾಗಿ ತಹಶೀಲ್ದಾರ್ ಕಚೇರಿಯಿಂದ ಅನುಮತಿಯನ್ನು ಪಡೆಯತಕ್ಕದ್ದು ಎಂದು ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಹೇಳಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಒಂದು ವಾರ್ಡ ನಲ್ಲಿ ಒಂದೇ ಸಾರ್ವಜನಿಕ ಗಣೇಶ ಸ್ಥಾಪನೆ ಆಗಬೇಕು ಹಾಗೂ ಮೂರ್ತಿ ೪ ಅಡಿಗಿಂತ ಅಧಿಕವಾಗಿರಬಾರದು.ಹೊಸದಾಗಿ ಸಾರ್ವಜನಿಕ ಗಣೇಶ ಕೂಡಿಸಲು ಅನುಮತಿ ಇಲ್ಲಾ. ಗಣೇಶೋತ್ಸವವನ್ನು ಆಯೋಜಿಸುವ ಸಂಘಟಕರು ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಪಡೆದಿರಬೇಕು. ಪೆಂಡಾಲಿನಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿತರಣೆಗೂ ನಿರ್ಬಂಧ ಹೇರಲಾಗಿದೆ. ಪಿಡಿಓ. ತಾಪಂ ಇಓ, ಪಪಂ ಮುಖ್ಯಾದಿಕಾರಿಗಳು ಹೊರ ರಾಜ್ಯ ,ಜಿಲ್ಲೆ ಯಿಂದ ಬರುವರ ಮೇಲೆ ನಿಗಾ ಇಟ್ಟು ಮಾಹಿತಿ ಪಡೆದುಕೊಳ್ಳಬೇಕು À ಕೋವಿಡ್ ೩ ಅಲೆ ಕುರಿತು ಜಾಗೃತರಾಗಿರಬೇಕು ಎಂದರು.
ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರ್ ಮಾತನಾಡಿ ಷರತ್ತುಗಳು ಉಲ್ಲಂಘನೆಯಾಗದAತೆ ಸರಳವಾಗಿ ಸೌಹಾರ್ಧಯುತವಾಗಿ ಗಣೇಶನ ಹಬ್ಬವನ್ನು ಆಚರಿಸಬೇಕು. ಪೆಂಡಾಲಿನಲ್ಲಿ ೨೦ ಜನ ಮೀರದಂತೆ ಎಚ್ಚರ ವಹಿಸಬೇಕು. ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸ್ ಅಥವಾ ಗೃಹ ರಕ್ಷಕರ ನೇಮಕ ಮಾಡಲಾಗುವುದಿಲ್ಲ. ಬದಲಾಗಿ ಸಂಘಟಕರೇ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು .ಗಣೇಶ ಪ್ರತಿಷ್ಠಾಪನೆ ,ವಿಸರ್ಜನೆ ಮಾಡುವಾಗ ಮೆರವಣಿಗೆ ಮಾಡುವಂತಿಲ್ಲ. ನಿಯಮ ಉಲ್ಲಂಘನೆಯಾದರೆ ಸಂಘಟಕರೇ ಜವಾಬ್ದಾರರು ಎಂದರು.
: ಪಟ್ಟಣ ಪಂಚಾAಯ್ತಿ ಮುಖ್ಯಧಿಕಾರಿ ಅರುಣ ನಾಯ್ಕ ಮಾತನಾಡಿ . ಪ. ಪಂ ನಿಂದ್ ಸಂಘಟಕರು ನಿರರ್ಪೆಕ್ಷಣಾ ಪತ್ರ ಪಡೆದುಕೊಳ್ಳಬೇಕು.ಕಾಳಮ್ಮ ನ ಕೆರೆ. ನಾಯಕನ ಕೆರೆ, ಜೋಡುಕೆರೆ ೩ಕಡೆಗಳಲ್ಲಿ ಗಣೇಶನ್ ವಿಸರ್ಜನೆಗೆ ಅವಕಾಶ ನೀಡಲಾಗಿದೆ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, .
ಅಗ್ನಿ ಶಾಮಕ ದಳದ ಅಧಿಕಾರಿ ಶಂಕರ್ ಮಾತನಾಡಿದರು. ಪಿ ಎಸ್ ಐ ಮಂಜುನಾಥ್ ಗೌಡರ್ ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ನಾಗಪ್ಪ ವಂದಿಸಿದರು.
Leave a Comment