ಹೊನ್ನಾವರ: ತಾಲೂಕಿನಗ್ರಾಮೀಣ ಭಾಗದ ಸಮಸ್ಯೆ ಹಾಗೂ ಪರಿಹಾರ ಕಂಡುಕೊಳ್ಳಲು ಗ್ರಾಮ ಪಂಚಾಯತ ಅಧ್ಯಕ್ಷರ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಿಯಾಂಗ ಎಸ್. ನೇತೃತ್ವದಲ್ಲಿ ಪ್ರಗತಿಪರ ಪರಿಶೀಲನಾ ಸಭೆ ಜರುಗಿತು.ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ನಿರೀಕ್ಷೀತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ.
ಶೌಚಾಲಯ ರಚನೆಯು ತಾಲೂಕಿನ ಸಾಧನೆ ಕಡಿಮೆ ಆಗಿದ್ದು, ಕಾಮಗಾರಿ ವಿಳಂಬದ ಚರ್ಚೆ ನಡೆಯಿತು.ಸಭೆಯಲ್ಲಿ ಉಪಸ್ಥಿತರಿದ್ದ ಹಳದೀಪುರದ ಗ್ರಾ.ಪಂ. ಅಧ್ಯಕ್ಷರಾದ ಅಜಿತ್ ನಾಯಕ್ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ನಿಂದ ಮಂಜೂರಾದ ಬಾವಿ ಇದ್ದು ಆ ಭಾಗದ ಪರಿಶಿಷ್ಟ ಜಾತಿಗೆ ಸೇರಿರುವ ೫ ಕುಟುಂಬಗಳಿಗೆ ನೀರು ನೀಡಲು ಜಾಗದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇವರು ಈ ಹಿಂದಿನ ಗ್ರಾ.ಪಂ.ಮಾಜಿ ಸದಸ್ಯರಾಗಿದ್ದಾರೆ. ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯತ ಗೆ ಪತ್ರದ ಮೂಲಕ ಸಮಸ್ಯೆ ಪರಿಹರಿಸಲು ಹಲವು ಬಾರಿ ಕೊರಿಕೊಂದ್ದೇವೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದಾಗ ಈ ಬಗ್ಗೆ ಸಂಭದಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುದಾಗಿ ತಿಳಿಸಿದರು.ಮಾವಿನಕುರ್ವಾ ಗ್ರಾ.ಪಂ.ಅಧ್ಯಕ್ಷ ಜಿ.ಜಿ. ಶಂಕರ್ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಮನೆಗಳಲ್ಲಿ ಜನ ಸಂಖ್ಯೆ ಹೆಚ್ಚಾದಾಗ ಬೇರೆ ಮನೆಗಳನ್ನು ಕಟ್ಟಿ ಕೊಳ್ಳುತ್ತಾರೆ. ಸರ್ಕಾರದ ಅನುದಾನದಿಂದ ನಿರ್ಮಿಸಲಾದ ಮನೆಗಳಿಗೆ ಮಾತ್ರ ಮನೆ ನಂಬರ್ ಸಿಗುತ್ತದೆ.
ತಮ್ಮ ಜಾಗದಲ್ಲಿ ಸ್ವಂತ ಹಣದಿಂದ ಮನೆ ನಿರ್ಮಿಸಿಕೊಂಡವರಿಗೆ ಈ ವರೆಗೆ ಮನೆ ನಂಬರ್ ಸಿಗುತ್ತಿಲ್ಲ. ಸರ್ಕಾರದ ನಿಯಮಾನುಸಾರ ನಂಬರ್ ಇಲ್ಲದ ಮನೆಗೆ ನೀರು ಹಾಗೂ ವಿದ್ಯುತ್ ಸೌಲಭ್ಯ ನೀಡಲು ಆಗುವುದಿಲ್ಲ. ವಿದ್ಯುತ್ ಇಲ್ಲದೆ ಮಕ್ಕಳು ದೀಪದ ಬೆಳಕಲ್ಲಿ ಓದಬೇಕಾಗುತ್ತದೆ.ಜಿಲ್ಲೆಯಲ್ಲಿ 75% ಜನ ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಿಸಿದ್ದಾರೆ. 25% ಜಾಗದಲ್ಲಿ ವಾಸಿಸುವ ಜನರನ್ನು ದೊಡ್ಡ ದೊಡ್ಡ ಯೋಜನೆಗಳನ್ನು ತರುವುದರ ಮೂಲಕ ಗುಳೆ ಎಬ್ಬಿಸುತ್ತಿದ್ದಾರೆ ಎಂದರು.
ಕರ್ಕಿ ಹಾಗೂ ಕಡತೋಕಾ, ನವಿಲಗೋಣ ಪಂಚಾಯತಿ ವ್ಯಾಪ್ತಿಯಲ್ಲಿ ಗದ್ದೆಗಳಿಗೆ ನೀರು ನುಗ್ಗುತ್ತಿದ್ದು ಚೆಕ್ ಡ್ಯಾಂ, ತಡೆಗೋಡೆ ನಿರ್ಮಾಣ ಮಾಡಿಕೊಡುವಂತೆ ಕೋರಿದರು.
ಸಭೆ ನೇತೃತ್ವ ವಹಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ತಾಲೂಕಿನ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣವಾಗಲೇಬೇಕು. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು. ಈ ಹಿಂದೆ ಮಂಜೂರಾಗಿರುವ ಶೌಚಾಲಯಗಳು ಇನ್ನು ಪೂರ್ಣಗೊಂಡಿಲ್ಲ. ಮತ್ತೆ ಬೇಡಿಕೆ ಇದ್ದಲ್ಲಿ ಶೌಚಾಲಯಗಳನ್ನು ಪೂರೈಕೆ ಮಾಡಲಾಗುವುದು ಅಕ್ಟೋಬರ್ 2 ರೊಳಗಾಗಿ ಎಲ್ಲಾ ಪಂಚಾಯಿತಿ ಪಿಡಿಓಗಳು ಕಾಮಗಾರಿಯನ್ನು ಪೂರ್ತಿಗೊಳಿಸುವಲ್ಲಿ ಗಮನಹರಿಸಬೇಕಿದೆ ಎಂದರು.ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ತಾಲೂಕ ಪಂಚಾಯತಿ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment