ಕುಮಟಾ: ಆಹಾರ ಅರಸಿ ಕಾಡಿನಿಂದ ನಾಡಿಗೆ
ಬಂದಿದ್ದ ಚಿರತೆಯೊಂದು ಮನೆಯೊಂದರ
ಬೋನಿನಲ್ಲಿ ಇದ್ದ ನಾಯಿ ಹಿಡಿಯಲು
ಹೋಗಿ ಬೋನಿನಲ್ಲೇ ಬಂಧಿಯಾದ ಘಟನೆ
ತಾಲೂಕಿನ ಕಿಮಾನಿಯಲ್ಲಿ ಬುಧವಾರ
ತಡರಾತ್ರಿ ನಡೆದಿದೆ.
ತಾಲೂಕಿನ ಕಿಮಾನಿಯಲ್ಲಿ ತಡ ರಾತ್ರಿ ಆಹಾರ
ಅರಸಿಬಂದ ಚಿರತೆ ಸ್ಥಳೀಯ ನಿವಾಸಿಗಳಾದ ವಿಷ್ಣು
ಹಿರಕಂತ್ರ ಅವರ ಮನೆಯ ಬೋನಿನಲ್ಲಿದ್ದ ನಾಯಿಯನ್ನು
ಹಿಡಿಯಲು ಮುಂದಾಗಿತ್ತು.
ಚಿರತೆಯನ್ನು ನಾಯಿ
ಬೋನಿನೊಳಗೆ ಹೋಗಿದ್ದನ್ನು ಗಮನಿಸಿದ ಮನೆಯ
ಮಾಲಿಕರು ತಕ್ಷಣ ಸಮಯ ಪ್ರಜ್ಞೆಯಿಂದ ಬೋನನ್ನು
ಲಾಕ್ ಮಾಡಿದ್ದಾರೆ. ಈ ವೇಳೆಗಾಗಲೇ ಬೋನಿನಲ್ಲಿದ್ದ
ನಾಯಿ ತಪ್ಪಿಸಿಕೊಂಡಿತ್ತು. ತಕ್ಷಣ ಮನೆಯವರು ಈ
ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ವಿಷಯ
ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ
ಧಾವಿಸಿ, ಚಿರತೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ
ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಸಿಎಫ್ ಗುರುದಾಸ
ಶೇಟ್, ಆರ್ಎಫ್ಒ ನರೇಶ್ ಹಾಗೂ ವನ್ಯಜೀವಿ
ಸಂರಕ್ಷಕರಾದ ಅಶೋಕ್ ನಾಯ್ಕ ತದಡಿ, ಪವನ ನಾಯ್ಕ
ಕುಮಟಾ, ಮಹೇಶ ನಾಯ್ಕ ಅಂಕೋಲಾ ಪ್ರಮುಖ
ಪಾತ್ರ ವಹಿಸಿದ್ದರು.
Leave a Comment