ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಹೊನ್ನಾವರ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ೭೧ ದೀಪ ಬೆಳಗಿಸಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಕೊರೊನಾ ವಾರಿಯರ್ಸ್ ಆಗಿರುವ ತಾಲೂಕಿನ ಅಂಬುಲೆನ್ಸ್ ಚಾಲಕರಿಗೆ ಸನ್ಮಾನಿಸಿ ಗೌರವಿಸಿದರು.
ನಂತರ ದೇವರ ಪ್ರಸಾದ, ಸಿಹಿ ಹಂಚಿಸಂಭ್ರಮಿಸಿದರು.ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜೇಶ ಭಂಡಾರಿಪ್ರಾಸ್ತವಿಕವಾಗಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಸಪ್ಟಂಬರ್ ೧೭ ರಿಂದ ಅಕ್ಟೋಬರ್ ೭ರ ವರೆಗೆಸ್ವಚ್ಛತಾ ಅಭಿಯಾನ ಸೇರಿದಂತೆ ವಿವಿಧ ಅಭಿಯಾನವನ್ನುಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ಹೊನ್ನಾವರ ತಾಲೂಕಿನ ಉಸ್ತುವಾರಿ ಶಿವಾನಿ ಶಾಂತಾರಾಮಮಾತನಾಡಿ ಸಪ್ಟಂಬರ್ ೧೭ ಪ್ರಧಾನಿ ನರೇಂದ್ರ ಮೋದಿಯವರಜನ್ಮ ದಿನವಾಗಿದ್ದು ಅಕ್ಟೋಬರ್ ೧೭ ಅವರು ರಾಜಕೀಯಕ್ಕೆ ಬಂದ ದಿನವಾಗಿದೆ. ಹಾಗಾಗಿ ಈ ೨೦ ದಿನಗಳ ವರೆಗೆ ತಾಲೂಕಿನಲ್ಲಿ ವಿವಿಧ ರೀತಿಯ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ನಡರಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಪಕ್ಷದ ಮುಖಂಡರಾದ ಉಮೇಶ ನಾಯ್ಕ, ಭಾಗ್ಯಾಮೇಸ್ತ, ಎಂ.ಜಿ,ನಾಯ್ಕ, ಸುರೇಶ ಹರಿಕಾಂತ ಮಂಜುನಾಥ ನಾಯ್ಕ,ಸುಬ್ರಾಯ ನಾಯ್ಕ, ಶಾರದಾ ನಾಯ್ಕ, ಎನ್.ಎಸ್.ಹೆಗಡೆ, ಆನಂದು ನಾಯ್ಕ ಎಂ.ಎಸ್.ಹೆಗಡೆಕಣ್ಣಿಮನೆ, ವಿನೋದ ನಾಯ್ಕ ರಾಯಲಕೇರಿ, ಸುರೇಶ ಖಾರ್ವಿ, ನಾಗರಾಜ ಭಟ್,ಉಮೇಶ ಸಾರಂಗ, ಉಲ್ಲಾಸ ನಾಯ್ಕ, ಲೋಕೇಶ ಮೇಸ್ತ, ವಿಜುಕಾಮತ, ಮಾರುತಿ ಗೌಡ, ಶ್ರೀಕಾಂತ ಮೊಗೇರ, ಗೋವಿಂದ ಮಹೇಶಮೇಸ್ತ, ಗಣಪತಿ ಗೌಡ ಚಿತ್ತಾರ, ಬಾಲು ಗೌಡ, ನಿಶಾಶೇಟ್, ಸುಜಾತ ಮೇಸ್ತ, ಮತ್ತಿತರರು ಉಪಸ್ಥಿತರಿದ್ದರು.
Leave a Comment