ಬ್ರಹ್ಮಶ್ರೀ ನಾರಾಯಣ ಗುರುಗಳ ಪುಣ್ಯ ತಿಥಿಯ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹೊನ್ನಾವರ ತಾಲೂಕಾ ಘಟಕದ ಇವರ ಆಶ್ರಯದಲ್ಲಿ ಹೊನ್ನಾವರ ಪಟ್ಟಣದ ರಾಯಲಕೇರಿಯ ಅಂಬೆಡ್ಕರ್ ಸಭಾಭವನಲ್ಲಿ ಜರುಗಿತು. ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಹೊನ್ನಾವರ ತಾಲೂಕಾ ಅಧ್ಯಕ್ಷರಾದ ಧನಂಜಯ ನಾಯ್ಕ ರಾಯಲಕೇರಿ ಮಾತನಾಡಿ ನಾರಯಣ ಗುರುಗಳ ತತ್ತ್ವ ಸಿದ್ಧಾಂತ ಅತ್ಯಂತ ಸರಳ ಮತ್ತು ಸುಲಭವಾಗಿ ಎಲ್ಲರಿಗು ಅರ್ಥ ಆಗುವಂತದ್ದು.
ಶ್ರೀ ನಾರಯಣ ಗುರುಗಳು ಒಂದೆ ಜಾತಿ ಒಂದೆ ಮತ ಒಂದೆ ಕುಲ ಎಂದು ಮನುಕುಲಕ್ಕೆ ಸಾರಿದರು. ಸಮಾಜದಲ್ಲಿ ಇದ್ದ ಜಾತೀಯತೆ, ಅಸ್ಪೃಶ್ಯತೆ, ಜೀತ, ಜಮೀನ್ದಾರಿ ಪದ್ಧತಿ, ಮೂಢನಂಬಿಕೆ ವಿರುದ್ಧ ಹೋರಾಡಿದರು. ಸಮಸ್ತ ಮನುಕುಲದ ಒಳಿತಿಗಾಗಿ ನಾವು ಅವರ ತತ್ತ್ವ ಸಿದ್ಧಾಂತವನ್ನು ಪಾಲಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಶ್ ನಾಯ್ಕಹಾಗು ಪದಾಧಿಕಾರಿಗಳಾದ ದಿನೇಶ ನಾಯ್ಕ, ಶ್ರೀನಿವಾಸ ನಾಯ್ಕ, ಅವಿನಾಶ ನಾಯ್ಕ, ಗಣಪತಿ ನಾಯ್ಕ, ಪ್ರದೀಪ ನಾಯ್ಕ, ನಾಗರಾಜ ನಾಯ್ಕ, ಶ್ರೀನಾಥ ನಾಯ್ಕ, ಸಂದೀಪ ನಾಯ್ಕ, ರಾಘವೇಂದ್ರ, ಪ್ರದೀಪ ನಾಯ್ಕ,ವಿನೊದ್ ನಾಯ್ಕ, ಶರತ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment