ಹೊನ್ನಾವರ : ಸೋಮವಾರ ಪ್ರಕಟವಾದ ಸಿ.ಇ.ಟಿ ಫಲಿತಾಂಶದಲ್ಲಿ ಹೊನ್ನಾವರದ ತನ್ಮಯ್ ಆರ್ ಪೂಜಾರಿ ಉನ್ನತ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ.
ಪಟ್ಟಣದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಖ್ಯಾತ ವೈದ್ಯರೂ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆಗಿರುವ ಡಾ.ರಂಗನಾಥ ಪೂಜಾರಿ ಅವರ ಮಗನಾದ ತನ್ಮಯ್ ಪೂಜಾರಿ ಎಂಜನಿಯರಿಂಗ್ ಅಲ್ಲಿ 743,ಬಿ.ಎನ್.ವೈ.ಎಸ್ ಅಲ್ಲಿ 182, ಅಗ್ರಿಕಲ್ಚರ್ ಬಿ.ಎಸ್ಸಿ ಯಲ್ಲಿ 171, ವೆಟರ್ನರಿ ಸೈನ್ಸ್ ಅಲ್ಲಿ 181, ಬಿ.ಫಾರ್ಮಾದಲ್ಲಿ ಮತ್ತು ಫಾರ್ಮಾ.ಡಿ ಯಲ್ಲಿ 275 ನೇ ರ್ಯಾಂಕ್ ಪಡೆದು ಸಾಧನೆ ತೋರಿದ್ದಾನೆ.
ಪಟ್ಟಣದ ಮಾರ್ಥೋಮಾ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ತನ್ಮಯ್ ಹಟ್ಟಿಯಂಗಡಿಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದ. ಪಿ.ಯು.ಶಿಕ್ಷಣನ್ನು ಮಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಡೆದಿದ್ದ.
ನೀಟ್ ಫಲಿತಾಂಶವನ್ನು ಎದುರುನೋಡುತ್ತಿರುವ ತನ್ಮಯ್ ಮುಂದೆ ಬಿ.ಎಂ. ಕಾರ್ಡಿಯಾಲಜಿಯನ್ನು ಓದಿ ಉತ್ತರಕನ್ನಡ ಜಿಲ್ಲೆಯಲ್ಲಿಯೇ ವೈದ್ಯಕೀಯ ಸೇವೆಯನ್ನು ಮುಂದುವರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಇವರ ಸಾಧನೆಗೆ ತಾಲೂಕಿನೆಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ..
Leave a Comment