• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭೂಮಿ ಎಂದರೆ ಬರೀ ಮಣ್ಣಲ್ಲ; ದೇವಿ:ಸ್ವರ್ಣವಲ್ಲೀ ಶ್ರೀ

September 24, 2021 by Jayaraj Govi Leave a Comment

ಯಲ್ಲಾಪುರ: ಭೂಮಿ ಎಂದರೆ ಬರೀ ಮಣ್ಣಲ್ಲ; ದೇವಿ. ಪ್ರಾಚೀನ ಕಾಲದಿಂದಲೂ ಭೂದೇವಿಯನ್ನು ಪೂಜಿಸುವುದು ನಮ್ಮ ಪದ್ಧತಿ. ಅದು ಸದಾ ಮುಂದುವರಿಯಬೇಕು. ಇಂದಿನ ಸಮಾಜ ಅಧರ್ಮ ದತ್ತ ಸಾಗುತ್ತಿದೆ. ಸಹಜವಾಗಿ ಜೀವನ ಪದ್ಧತಿಯೇ ಆ ದಾರಿಯಲ್ಲಿ ಕ್ರಮಿಸುತ್ತಿದೆ ಅದುವೇ ಸನ್ನಿವೇಶಗಳು ವಿಪ್ಲವಕ್ಕೆ ಕಾರಣವಾಗುತ್ತಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

FB IMG 16324221669270064

ಅವರು ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಗುಡ್ಡ-ರಸ್ತೆ ಕುಸಿತ ಪ್ರದೇಶ ವೀಕ್ಷಿಸಿ, ಆದರ್ಶ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಪ್ರಕೃತಿ ವೀಕೋಪದಿಂದ ಹಾನಿಗೊಳಗಾದ 45 ಕುಟುಂಬಗಳಿಗೆ ಪ್ರಸಾದ ರೂಪದ ಚೆಕ್ ವಿತರಿಸಿ, ಆಶೀರ್ವಚನ ನೀಡುತ್ತಿದ್ದರು.

ಇತಿಹಾಸದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಹಾನಿ ನಮ್ಮ ಪ್ರದೇಶದಲ್ಲಿ ಆಗಿದ್ದಿಲ್ಲ. ಉತ್ತರಪ್ರದೇಶದ ಭಾಗದಲ್ಲಿ ನೂರಾರು ಜನರು, ಊರಿಗೆ ಊರೂ ಕೊಚ್ಚಿ ಹೋಗಿರುವುದನ್ನ ನೋಡಿದ್ದೇವೆ, ಕೇಳಿದ್ದೇವೆ. ಆದರೆ, ನಮ್ಮ ಪ್ರದೇಶದಲ್ಲಿಯೂ ಇಂತಹ ಸ್ಥಿತಿ ಬಂದಿದೆ. ಈ ಕುರಿತು ಈಗಾಗಲೇ ಅನೇಕ ತಜ್ಞರು ಕಳಚೆ ಸೇರಿದಂತೆ ಈ ಎಲ್ಲ ಸ್ಥಳಗಳನ್ನ ವೀಕ್ಷಿಸಿ ಅಧ್ಯಯನ ಮಾಡಿದ್ದಾರೆ. ಅವರ ಸಲಹೆಯಂತೆ ಆದಷ್ಟು ಶೀಘ್ರದಲ್ಲಿ ಕಳಚೆ ಭಾಗದ ಸಂಪೂರ್ಣ ಜನರನ್ನ ಸ್ಥಳಾಂತರಿಸಲೇಬೇಕಾಗಿದೆ. ಸರ್ಕಾರ ಈ ಪರಿಸ್ಥಿತಿಯ ಕುರಿತು ಗಂಭೀರವಾಗಿ ಪರಿಗಣಿಸಿದ್ದರೂ, ಅಷ್ಟೇ ತ್ವರಿತವಾಗಿ ಜನರ ಸಮಸ್ಯೆಗೆ ಸ್ಪಂದನೆ ನೀಡುತ್ತಿರುವುದು ಕಂಡುಬಂದಿಲ್ಲ.

FB IMG 16324221499297846

ಆ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು, ಸಚಿವರು ಸರ್ಕಾರದ ನೆರವನ್ನು ಶೀಘ್ರದಲ್ಲಿ ದೊರಕಿಸಿಕೊಡುವಂತೆ ಮಾಡಬೇಕೆಂದ ಶ್ರೀಗಳು, ಶ್ರೀಮಠದಿಂದ ಮತ್ತು ಕೆಲವು ಸಂಘ-ಸಂಸ್ಥೆ, ದಾನಿಗಳಿಂದ ಸಂಗ್ರಹಿಸಿ ಹಾನಿಗೊಳಪಟ್ಟ ಶಿಷ್ಯ ಸಮುದಾಯಕ್ಕೆ ಇನ್ನೂ ಹೆಚ್ಚಿನ ನೆರವನ್ನ ನೀಡಬೇಕಾಗಿತ್ತು. ಆದರೆ ಅದು ಸಾಧ್ಯವಾಗದೇ ಇದ್ದರೂ ಪ್ರಸಾದ ರೂಪದಲ್ಲಿ ನೀಡುತ್ತಿದ್ದೇವೆ. ಕಳೆದ ಎರಡು ತಿಂಗಳ ಹಿಂದೆ ಜರುಗಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಚಾತುರ್ಮಾಸ್ಯ ವೃತಾಚರಣೆಯ ಕಾರಣದಿಂದ ಭೇಟಿಕೊಡಲು ಸಾಧ್ಯವಾಗಿಲ್ಲ. ಆದರೂ ಶಿಷ್ಯರಿಂದ ಘಟನೆಯ ಮಾಹಿತಿ ಪಡೆದು, ಸರ್ಕಾರಕ್ಕೆ ತಕ್ಷಣ ಸ್ಪಂದಿಸುವಂತೆ ಮಠದಿಂದ ಆಗ್ರಹಿಸಲಾಗಿತ್ತು ಎಂದರು.

ಶ್ರೀಮಠದ ವ್ಯವಸ್ಥಾಪಕ ಎಸ್.ಎನ್.ಗಾಂವ್ಕರ ಬೆಳ್ಳಿಪಾಲ ಹಾನಿಯ ಮಾಹಿತಿಯನ್ನು ನೀಡಿದರು. ವೇದ ವಿದ್ವಾಂಸರಿಂದ ವೇದಘೋಷ, ಡಿ.ಶಂಕರ ಭಟ್ಟ ಸ್ವಾಗತಿಸಿದರು, ಆದರ್ಶ ಸೇ.ಸ.ಸಂಘದ ಅಧ್ಯಕ್ಷ ನಾಗೇಂದ್ರ ಹೆಗಡೆ ಫಲ ಸಮರ್ಪಿಸಿದರು. ವೆಂಕಟ್ರಮಣ ಬೆಳ್ಳಿ ನಿರ್ವಹಿಸಿದರು. ಟಿ.ಎನ್.ಭಟ್ಟ ನಡಿಗೆಮನೆ ವಂದಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur Tagged With: ಅಧರ್ಮ ದತ್ತ, ಈಗಾಗಲೇ ಅನೇಕ ತಜ್ಞರು, ಕಳಚೆ ಸೇರಿದಂತೆ, ಕೆಲವು ಸಂಘ-ಸಂಸ್ಥೆ, ಚಾತುರ್ಮಾಸ್ಯ ವೃತಾಚರಣೆ, ಸ್ಥಳಗಳನ್ನ ವೀಕ್ಷಿಸಿ ಅಧ್ಯಯನ

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...