• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂತ ಇಗ್ನೇಷಿಯಸ್ ಆಸ್ಪತ್ರೆಗೆ ಸ್ಪಂದನ ಅವಾರ್ಡ್ ೨೦೨೧ ಪ್ರಶಸ್ತಿ ಪುರಸ್ಕಾರ”

September 26, 2021 by Vishwanath Shetty Leave a Comment

ಹೊನ್ನಾವರ; ಉತ್ತಮ ಸೇವೆಯನ್ನು ನೀಡುವ ಜನರಾಗಲಿ, ಸಂಸ್ಥೆಯಾಗಲಿ ಪ್ರಶಸ್ತಿ ಪುರಸ್ಕಾರದಿಂದ ಸೇವೆಯನ್ನು ಮುಂದುವರಿಸಲು ಸ್ಪೂರ್ತಿಯನ್ನು ತುಂಬುತ್ತದೆ ಎಂದು ಭಾರತೀಯ ಮನೋವೈದ್ಯಕೀಯ ಸೊಸೈಟಿ, ಕರ್ನಾಟಕ ಶಾಖೆ, ಬೆಂಗಳೂರು ಇವರ ಕಾರ್ಯದರ್ಶಿಗಳಾದ ಡಾ|| ಸೋಮ್‌ಶೇಖರ ಬಿಜ್ಜಾಳರವರು ನುಡಿದರು.

ಅವರು ಸಂತ ಇಗ್ನೇಷಿಯಸ್ ಆಸ್ಪತ್ರೆ, ಹೊನ್ನಾವರ ಇವರ ಸಮಾಜ ಸೇವಾ ಕ್ಷೇತ್ರದ ಕೊಡುಗೆ ಹಾಗೂ ವಿಶೇಷವಾಗಿ ಮನೋವೈದ್ಯಕೀಯ ಸೇವೆಯಿಂದ ಮದ್ಯವ್ಯಸನ ಮುಕ್ತದಿಂದ ಹಲವಾರು ಕುಟುಂಬಕ್ಕೆ ಸೇವೆ ನೀಡಿರುವ ಛಲವಾಗಿ “ಸ್ಪಂದನ ಅವಾರ್ಡ್ ೨೦೨೧” ಪ್ರಶಸ್ತಿ ಪುರಸ್ಕಾರವನ್ನು ಆಸ್ಪತ್ರೆಯ ನಿರ್ದೇಶಕರ ಕಛೇರಿಯಲ್ಲಿ ವಂದನೀಯ ಸಿ.ಮಾರಿಯಾ ಗೊರೆಟ್ಟಿಯವರಿಗೆ ನೀಡಿ ಪುರಸ್ಕರಿಸಿದರು.

c60ac721 f347 4be1 b77d c14893bd53cb

ಪ್ರಶಸ್ತಿ ಪಡೆಯಲು ಇರುವ ಅರ್ಹತೆಗಳನ್ನು ವಿವರಿಸಿ ಆಸ್ಪತ್ರೆಯು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ ವ್ಯಸನಿಗಳ ಬದುಕನ್ನು ಹಸನಾಗಿಸಲು ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಶ್ಲಾಘಿಸಿ ಇಂತಹ ಹಲವಾರು ಯೋಜನೆಗಳನ್ನು ಆಯೋಜಿಸುವಂತೆ ಕರೆ ನೀಡಿದರು.

ಪ್ರಶಸ್ತಿಯನ್ನು ಸ್ವೀಕರಿಸಿದ ಸಿ.ಮಾರಿಯಾ ಗೊರೆಟ್ಟಿ- ನಿರ್ದೇಶಕರು ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಇಮ್ಮಡಿಯಾಗಿದ್ದಲ್ಲದೇ ಇಷ್ಟು ವರ್ಷದಿಂದ ಯಾರೂ ಗುರುತಿಸಲಾಗದ ಕಾರ್ಯವನ್ನು ನೀವು ಮಾಡಿದ್ದು ನಮಗೆ ಸ್ಪೂರ್ತಿಯಾಗಿದೆ. ಅಲ್ಲದೇ ಇದನ್ನು ಮುಂದುವರಿಸಿ ನಮ್ಮಂತೆ ಇತರರಿಗೂ ಸ್ಪೂರ್ತಿ ನೀಡುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಖೆಯ ಖಜಾಂಜಿಗಳಾದ ಡಾ|| ನಾರಾಯಣ ಮುತಾಲಿಕ್ ಹಾಗೂ ಡಾ|| ಫಕಿರಪ್ಪರವರು ಉಪಸ್ಥಿತರಿದ್ದರು. ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದ ತಜ್ಞರಾದ ಡಾ|| ವಿಶಾಲ್‌ರವರು ಶಾಖೆಯ ಪದಾಧಿಕಾರಿಗಳ ಪರಿಚಯ ಮಾಡಿದರು. ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂ.ಸಿ.ಲೀನಾ ಹಾಗೂ ಮಾನಸಿಕ ಚಿಕಿತ್ಸಾ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ, ಗೊರೆಟ್ಟಿ- ನಿರ್ದೇಶಕರು ಈ ಪ್ರಶಸ್ತಿ, ಪ್ರಶಸ್ತಿ ಪಡೆಯಲು ಇರುವ ಅರ್ಹತೆಗಳನ್ನು ವಿವರಿಸಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...