ಹೊನ್ನಾವರ; ಉತ್ತಮ ಸೇವೆಯನ್ನು ನೀಡುವ ಜನರಾಗಲಿ, ಸಂಸ್ಥೆಯಾಗಲಿ ಪ್ರಶಸ್ತಿ ಪುರಸ್ಕಾರದಿಂದ ಸೇವೆಯನ್ನು ಮುಂದುವರಿಸಲು ಸ್ಪೂರ್ತಿಯನ್ನು ತುಂಬುತ್ತದೆ ಎಂದು ಭಾರತೀಯ ಮನೋವೈದ್ಯಕೀಯ ಸೊಸೈಟಿ, ಕರ್ನಾಟಕ ಶಾಖೆ, ಬೆಂಗಳೂರು ಇವರ ಕಾರ್ಯದರ್ಶಿಗಳಾದ ಡಾ|| ಸೋಮ್ಶೇಖರ ಬಿಜ್ಜಾಳರವರು ನುಡಿದರು.
ಅವರು ಸಂತ ಇಗ್ನೇಷಿಯಸ್ ಆಸ್ಪತ್ರೆ, ಹೊನ್ನಾವರ ಇವರ ಸಮಾಜ ಸೇವಾ ಕ್ಷೇತ್ರದ ಕೊಡುಗೆ ಹಾಗೂ ವಿಶೇಷವಾಗಿ ಮನೋವೈದ್ಯಕೀಯ ಸೇವೆಯಿಂದ ಮದ್ಯವ್ಯಸನ ಮುಕ್ತದಿಂದ ಹಲವಾರು ಕುಟುಂಬಕ್ಕೆ ಸೇವೆ ನೀಡಿರುವ ಛಲವಾಗಿ “ಸ್ಪಂದನ ಅವಾರ್ಡ್ ೨೦೨೧” ಪ್ರಶಸ್ತಿ ಪುರಸ್ಕಾರವನ್ನು ಆಸ್ಪತ್ರೆಯ ನಿರ್ದೇಶಕರ ಕಛೇರಿಯಲ್ಲಿ ವಂದನೀಯ ಸಿ.ಮಾರಿಯಾ ಗೊರೆಟ್ಟಿಯವರಿಗೆ ನೀಡಿ ಪುರಸ್ಕರಿಸಿದರು.

ಪ್ರಶಸ್ತಿ ಪಡೆಯಲು ಇರುವ ಅರ್ಹತೆಗಳನ್ನು ವಿವರಿಸಿ ಆಸ್ಪತ್ರೆಯು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ ವ್ಯಸನಿಗಳ ಬದುಕನ್ನು ಹಸನಾಗಿಸಲು ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಶ್ಲಾಘಿಸಿ ಇಂತಹ ಹಲವಾರು ಯೋಜನೆಗಳನ್ನು ಆಯೋಜಿಸುವಂತೆ ಕರೆ ನೀಡಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಸಿ.ಮಾರಿಯಾ ಗೊರೆಟ್ಟಿ- ನಿರ್ದೇಶಕರು ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಇಮ್ಮಡಿಯಾಗಿದ್ದಲ್ಲದೇ ಇಷ್ಟು ವರ್ಷದಿಂದ ಯಾರೂ ಗುರುತಿಸಲಾಗದ ಕಾರ್ಯವನ್ನು ನೀವು ಮಾಡಿದ್ದು ನಮಗೆ ಸ್ಪೂರ್ತಿಯಾಗಿದೆ. ಅಲ್ಲದೇ ಇದನ್ನು ಮುಂದುವರಿಸಿ ನಮ್ಮಂತೆ ಇತರರಿಗೂ ಸ್ಪೂರ್ತಿ ನೀಡುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಖೆಯ ಖಜಾಂಜಿಗಳಾದ ಡಾ|| ನಾರಾಯಣ ಮುತಾಲಿಕ್ ಹಾಗೂ ಡಾ|| ಫಕಿರಪ್ಪರವರು ಉಪಸ್ಥಿತರಿದ್ದರು. ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದ ತಜ್ಞರಾದ ಡಾ|| ವಿಶಾಲ್ರವರು ಶಾಖೆಯ ಪದಾಧಿಕಾರಿಗಳ ಪರಿಚಯ ಮಾಡಿದರು. ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂ.ಸಿ.ಲೀನಾ ಹಾಗೂ ಮಾನಸಿಕ ಚಿಕಿತ್ಸಾ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment