ಯಲ್ಲಾಪುರ ಪಟ್ಟಣದ ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್ ನಡೆಯಿತು. ಸಿವಿಲ್ ಜಡ್ಜ್ ಹಿರಿಯ ವಿಭಾಗ ಮತ್ತು ಮತ್ತು ಪ್ರಧಾನ ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ರಾಜಿಗೆ ಇಟ್ಟ 44 ಪ್ರಕರಣಗಳಲ್ಲಿ 10 ಪ್ರಕರಣಗಳು ಇತ್ಯರ್ಥವಾದವು.
ನ್ಯಾಯಾಧೀಶರಾದ ನಾಗಮ್ಮಾ ಇಚ್ಚಣಗಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.
ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ರಾಜಿಗೆ ಇಟ್ಟ 176 ಪ್ರಕರಣಗಳಲ್ಲಿ 39 ಪ್ರಕರಣಗಳು ಇತ್ಯರ್ಥವಾದವು. ನ್ಯಾಯಾಧೀಶರಾದ ಓಂಕಾರಮೂರ್ತಿಯವರು ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.ಒಟ್ಟು 12,41,487ರೂ ದಂಡ ವಸೂಲಿ . 23,42,681ರೂ ಭರಣ ಮಾಡಿಕೊಳ್ಳ ಲಾಗಿದೆ.
ಈ ಸಂದರ್ಭದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಜೀನತ್, ಸಂಧಾನಕಾರರಾಗಿ .ಹಿರಿಯ ನ್ಯಾಯವಾದಿಗಳಾದ ಜಿ.ಎಸ್.ಭಟ್ಟ ಹಳವಳ್ಳಿ, ಡಿ.ಕೆ.ಭಟ್ಟ,ಆರ್.ಕೆ.ಭಟ್ಟ, ,ವಿ.ಎನ್.ನಾಯ್ಕ, ವಿ.ಟಿ.ಭಟ್ಟ,ಜಿ.ಎಸ್.ಭಟ್ಟ, ಎನ್.ಕೆ.ಭಾಗ್ವತ್,ಪ್ರಕಾಶ ಭಟ್,ಎನ್.ಟಿ.ಗಾಂವ್ಕಾರ್, ಬಿಬಿ ಅಮೀನಾ ಶೇಖ್,ಜಿ .ಜಿ.ಪಾಠಣಕರ್ ಎಸ್.ಜೆ.ಚವ್ಹಾಣ,ಕಾರ್ಯನಿರ್ವಹಿಸಿದರು.ಲೀಗಲ್ ಏಡ್ ಸಿಬ್ಬಂದಿಗಳು, ನ್ಯಾಯಾಲಯದ ಸಿಬ್ಬಂದಿಗಳು, ಪೋಲೀಸ್ ಸಿಬ್ಬಂದಿಗಳು, ಇದ್ದರು.
Leave a Comment