ಹೊನ್ನಾವರ :ಪಟ್ಟಣ ಪಂಚಾಯತ್ ಮಂಕಿ ಹಾಗೂ ವಿವಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಕಿಯಲ್ಲಿ, ಅಜಾದಿಕ ಅಮೃತ ಮಹೋತ್ಸವ ಕಾರ್ಯಕ್ರಮ ತಹಶೀಲ್ದಾರ ನಾಗರಾಜ್ ನೈಕಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಂಕಿ ವ್ಯಾಪ್ತಿಯ ಸಪಾಯಿ ಮಿತ್ರ ಸನ್ಮಾನ ಕಾರ್ಯಕ್ರಮದಲ್ಲಿ 8 ಸಪಾಯಿ ಕರ್ಮಚಾರಿಗಳನ್ನು ಗುರುತಿಸಿ ಗೌರವಿ ಸಲಾಯಿತು.
ಮಂಕಿ ಪಟ್ಟಣ ವ್ಯಾಪ್ತಿಯ ತ್ಯಾಜ್ಯಗಳನ್ನು ಪುನರ್ಬಳಕೆಮಾಡುವ ತ್ಯಾಜ್ಯ ಉದ್ಯಮಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಪಟ್ಟಣದ ಹಲವು ಗಲ್ಲಿಗಳಲ್ಲಿ ಸಂಚರಿಸಿ ಅಂಗಡಿಕಾರರು ಮತ್ತು ತ್ಯಾಜ್ಯ ಉತ್ಪತ್ತಿಮಾಡುವ ವಿವಿಧ ಶ್ರೇಣಿಯ ಉದ್ದಿಮೆದಾರರಿಗೆ ಘನತ್ಯಾಜ್ಯ ವಿಂಗಡಣ,ಸಾರ್ವಜನಿಕ ಶೌಚಾಲಯದ ಬಳಕೆ ಕುರಿತು ಮಾಹಿತಿ ನೀಡಲಾಯಿತು. ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಜನಜಾಗೃತಿ ಜಾಥಾ ನಡೆಯಿತು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜೇಯ ಭಂಡಾಕರರವರು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಜಾನಕಿ ನಾಯ್ಕ, ವಿಪತ್ತು ನಿರ್ವಹಣಾ ಘಟಕ ಮಂಕಿಯ ಸಂಯೋಜಕಿ ಅಮಿತಾ ನಾಯ್ಕ್, ಸ್ತ್ರೀಶಕ್ತಿ ಸಂಘದ ಮೇಲ್ವಿಚಾರಕಿ ಜ್ಯೋತಿ, ರಾಮಕ್ಷತ್ರಿಯ ಸಂಘದ ಮಂಡಲ ಅಧ್ಯಕ್ಷೆ ಸರೋಜಾ ನಾಯ್ಕ್ ವಿವಿಧ ಸಂಘಸಂಸ್ಥೆಗಳ ಸದಸ್ಯರುಗಳು, ಸಾರ್ವಜನಿಕರು, ಹಾಗೂ ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ಗ್ರಂಥಾಲಯ ಮೇಲ್ವಿಚಾರಕರು ಭಾಗ ವಹಿಸಿದ್ದರು.
Leave a Comment