ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ, ಅಕ್ಟೊಬರ 2 ಗಾಂಧಿ ಜಯಂತಿ ಅಂಗವಾಗಿ ಹಳಿಯಾಳದ ಎಪಿಎಂಸಿ ಯಲ್ಲಿಯ ಮುರ್ಕವಾಡ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ,ಗಿಡ ಗಂಟಿಗಳನ್ನು ತೆಗೆದು, ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು , ಬೋಲ್ಡಗಳಲ್ಲಿ ಹಚ್ಚಿದ ಪೋಸ್ಟರಗಳನ್ನು ತೆಗೆದು ಹಾಕಿ .ಪಲಕಗಳನ್ನು ತೊಳೆದು ಸ್ವಚ್ಚ ಮಾಡಿ .ಅಲ್ಲಿಯೇ ಗಾಂಧಿಜಿಯವರ ಪೊಟೊವನ್ನು ಇಟ್ಟು ಪೂಜೆ ಮಾಡುವುದರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಅಹಿಂಸೆಯ ಅಸ್ತ್ರ ಹಿಡಿದು ರಾಷ್ಟ್ರವನ್ನು ಸ್ವಾತಂತ್ರ್ಯಗೊಳಿಸುವ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದ ಮಹಾತ್ಮಾ ಗಾಂಧಿಜೀ ಅವರ ಜನ್ಮ ಜಯಂತಿಯಂದು ನನ್ನ ಅನಂತಕೋಟಿ ಗೌರವಪೂರ್ವಕ ನಮನಗಳು ಎಂದು ವಿಧಾನ ಪರಿಷತ ಸದಸ್ಯ ಎಸ್. ಎಲ್. ಘೋಟ್ನೆಕರ ಹೇಳಿದರು.
ತಮ್ಮ ಜೀವನದೊದಕ್ಕೂ ಸರಳ ಬದುಕನ್ನು ಸಾಗಿಸಿದ ಮಹಾನ್ ಚೇತನ ಇಂದಿಗೂ ನಮಗೆ ಮಾದರಿ ನಾಯಕರಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷರಾದ ಬಸವರಾಜ ಬೆಂಡಿಗೇರಿಮಠ ಹೇಳಿದರು. ಗೌರವ ಅದ್ಯಕ್ಷ ವಿಜಯ ಪಡ್ನಿಸ, ಉಪಾಧ್ಯಕ್ಷ ವಿನೊದ ದೊಡ್ಡಮನಿ, ಕಾರ್ಯದರ್ಶಿ ಮಹೇಶ್ ಆಣೆಗುಂದಿ, ರೈತ ಘಟಕದ ಅದ್ಯಕ್ಷ ಸುರೇಶ್ ಕೊಕಿತಕರ , ಉಪಾಧ್ಯಕ್ಷ ರಾಮಾ ಜವಳೆಕರ, ಸುದಾಕರ ಕುಂಬಾರ,ಶಿವುಡಮ್ಮಣಿಗಿಮಠ,ಪತಂಜಲಿ ಸಂಸ್ಥೆಯ ಕಮಲ ಸಿಕ್ವೆರಾ,ವಕೀಲರಾದ ಮಂಜುನಾಥ ಮಾದಾರ, ರಾಮಕ್ರಷ್ಣ ಗುನಗಾ,ಅಶೊಕ ಪಾಟಿಲ, ಸಿಬಿ ಹಿರೇಮಠ,ನಾಗೇಶ ಹೆಗಡೆ,ಪರಶುರಾಮ ಕೊಳಾಂಬೆ,ಪರಶುರಾಮ ಚಲುವಾದಿ,ಮಾರುತಿ ಜಿವನ್ನವರ,ರಾಜು ತೊರಲೆಕರ, ರಮೇಶ ತೊರಲೆಕರ,ಅಬಿಷೆಕ ತೊರಲೆಕರ,ಹಾಗೂಪದಾದಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಬಾಗವಹಿಸಿ ದರು.
Leave a Comment