
ಯಲ್ಲಾಪುರ : ಕಳೆದ ಕೆಲವರ್ಷಗಳಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ತಾಲೂಕಿನ ನಂದೊಳ್ಳಿ ಶಾಲೆಯ ಪಾಲಕರು ಭಿನ್ನವಾಗಿ ಶಾಲಾ ಸೇವಾ ದಿನ ಎಂದೇ ಆಚರಿಸುತ್ತ ಬಂದಿದ್ದಾರೆ.

ಕೇವಲ ಪಾಲಕರಲ್ಲದೇ,ನಮ್ಮೂರ ಶಾಲೆ ಎಂಬ ಅಭಿಮಾನದಿಂದಲೇ ಊರಿನ ನಾಗರಿಕರೆಲ್ಲ ಸೇರಿ ಶಾಲೆಯ ಸ್ವಚ್ಛತೆಯಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಈ ಬಾರಿಯ ಗಾಂಧೀ ಜಯಂತಿಯ ಪ್ರಯುಕ್ತ ಗ್ರಾಮಸ್ಥರೆಲ್ಲ ಸ್ವ ಇಚ್ಛೆಯಿಂದ ಬಂದು ಸಂಪೂರ್ಣವಾಗಿ ಸ್ವಚ್ಛಗೊಳಿಸದರು. ಈ ಮೂಲಕ ಒಂದು ಸಮುದಾಯ ತಮ್ಮ ಶಾಲೆಯನ್ನು ಪ್ರೀತಿಸುವ ರೀತಿಗೆ ಪಾಲಕರು ಮಾದರಿಯಾದರು.ಪ್ರಮುಖವಾಗಿ ಅಧ್ಯಕ್ಷ ವಿನಾಯಕ ಭಟ್ ,ಗ್ರಾಮ ಪಂಚಾಯತ್ ಸದಸ್ಯ ಶಂಕರ ಭಟ್ ಕಲ್ಗಂದ, ವಕೀಲರಾದ ಗೋಪಾಲ ಕೃಷ್ಣ ಭಾಗ್ವತ , .ಮುಖ್ಯೋಪಾದ್ಯಾಪಕ ಭಾಸ್ಕರ ನಾಯ್ಕ,ಪಿಡಿಓ ಮಂಜುನಾಥ್ ,ಟಿ.ಆರ ಹೆಗಡೆ ,ಸಂತೋಷ್ ನಾಯ್ಕ್, ಮುಂತಾದವರು ಇದ್ದರು.
Leave a Comment