ಯಲ್ಲಾಪುರ :ಸ್ವಚ್ಛತೆಯೆಂದರೆ ಹುಲಗಪ್ಪಣ್ಣ ಎಂಬಷ್ಟು ಪ್ರೀತಿಯಿಂದ ತಮ್ಮ ಕೆಲಸವನ್ನು ಇವರು ನಿರ್ವಹಿಸುತ್ತ ಬಂದಿದ್ದಾರೆ ಎಂದು ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು ಅವರು .ಉಮ್ಮಚ್ಗಿ ಗ್ರಾಮಪಂಚಾಯತದಲ್ಲಿ ಗಾಂಧಿಜಯಂತಿ ನಿಮಿತ್ತ ಗಾಂದೀಜೀಯವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿದರು.ಉಮ್ಮಚ್ಗಿಯಲ್ಲಿ ವಾರದ ಸಂತೆ ಶುರುವಾದಾಗಿನಿಂದಲೂ ಇವರು ಊರಿನ ಸ್ವಚ್ಛತೆಯ ಕೆಲಸ ಮಾಡುತ್ತಿದ್ದಾರೆ. ಈಗಲೂ ತಮ್ಮ ಕೆಲಸ ನಿಲ್ಲಿಸಿಲ್ಲ.
ಹುಲಗಪ್ಪಣ್ಣ ಅವರಿಗೆ ದೇವರು ಆಯುರಾರೋಗ್ಯ ನೀಡಲಿ ಎಂದರು.
ಉಮ್ಮಚ್ಗಿ ಗ್ರಾ.ಪಂ. ಉಪಾಧ್ಯಕ್ಷ ಶಿವರಾಯ ಪೂಜಾರಿ, ಸದಸ್ಯರುಗಳಾದ ಗ.ರಾ.ಭಟ್ಟ, ತಿಮ್ಮವ್ವ ಬಸಾಪೂರ, ಲಲಿತಾ ವಾಲೀಕಾರ್ ಮೊದಲಾದವರಿದ್ದರು.
ಪಂಚಾಯತ ಅಧ್ಯಕ್ಷೆ ರೂಪ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಿ.ಡಿ.ಒ. ಶ್ರೀಧರ ಪಟಗಾರ ಸ್ವಾಗತಿಸಿ, ನಿರ್ವಹಿಸಿದರು . ನಂತರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
Leave a Comment