• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಾವತಿಯಾಗದ ವೇತನ;ಡಯಾಲಿಸಿಸ್ ಘಟಕ ಬಂದ್ ಮಾಡುವ ಎಚ್ಚರಿಕೆ

October 9, 2021 by Vishwanath Shetty Leave a Comment

ಹೊನ್ನಾವರ: ಬಡ ಡಯಾಲಿಸಿಸ್ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ  ತಾಲೂಕ  ಆಸ್ಪತ್ರೆಯ ಡಯಾಲಿಸಿಸ್ ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ವೇತನ ಪಾವತಿಯಾಗದ ಹಿನ್ನಲೆಯಲ್ಲಿ  ಸೋಮವಾರದಿಂದ ಡಯಾಲಿಸಿಸ್ ಘಟಕ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. 


ಇರ್ವರು ಶಾಸಕರ ವ್ಯಾಪ್ತಿಗೆ ಬರುವ ಹೊನ್ನಾವರ ತಾಲೂಕ  ಸರಕಾರಿ ಆಸ್ಪತ್ರೆಗೆ ಇಸ್ಪೋಸಿಸ್ ನೆರವಿನ ಬಳಿಕ ಸುಸಜ್ಜೀತ ಕಟ್ಟಡ ನಿರ್ಮಾಣವಾಗಿ ಜಿಲ್ಲೆಯಲ್ಲಿಯೇ ಉತ್ತಮ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರ ಜನವರಿ 9 ರಂದು ಆರಂಭಗೊಂಡಿತ್ತು. ಆರಂಭದಲ್ಲಿ ಒಂದು ಯಂತ್ರದಿಂದ ಆರಂಭವಾಗಿ ಇದೀಗ ನಾಲ್ಕು ಡಯಾಲಿಸಿಸ್ ಘಟಕದಲ್ಲಿ ಮೂರು ಕಾರ್ಯನಿರ್ವಹಿಸುತ್ತಿತ್ತು.

IMG 20211008 WA0074

ಕೋವಿಡ್ ಸಮಯದಲ್ಲಿಯೂ ಉತ್ತಮ ಸೇವೆಯ ಮೂಲಕ ಈ ಘಟಕ ನೆರವಾಗುತ್ತಿತ್ತು. ಇದರ ನಿರ್ವಹಣೆ ಮಾಡುತ್ತಿದ್ದ ಬಿ.ಆರ್.ಶೆಟ್ಟಿ ಕಂಪನಿಗೆ ಸರ್ಕಾರದಿಂದ ಪಾವತಿಯಾಗಬೇಕಿದ್ದ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ಇದರ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ನೀಡಿರಲಿಲ್ಲ.  ಈ ವರ್ಷ ಕೋವಿಡ್ ಮಧ್ಯೆ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ವೇತನವಿಲ್ಲದೇ ಕಾರ್ಯನಿರ್ವಹಿಸಿದ್ದರು.

ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ನಿರ್ವಹಣೆಗೆ ಹಣ ನೀಡಿ ಸಹಾಯಹಸ್ತದ ಪ ರಿಣಾಮವಾಗಿ ಬಡ ರೋಗಿಗಳಿಗೆ ಸಮಸ್ಯೆಯಾಗಿರಲಿಲ್ಲ.    ಆದರೆ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸತತ ಮೂರು ತಿಂಗಳ ಕಾಲ ವೇತನ ಪಾವತಿಯಾಗದೇ ಸಮಸ್ಯೆ ಎದುರಿಸಿದ್ದರು. ಸಂಭದಿಸಿದ ಇರ್ವರು ಶಾಸಕರು ಅಧಿಕಾರಿಗಳು ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಒಂದು ತಿಂಗಳು ಆರು ಸಾವಿರ ಹಣವನ್ನು ಶಾಸಕ ದಿನಕರ ಶೆಟ್ಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾ ಹೋದರು.  ಹಲವಾರು ಬಾರಿ ಮನವಿ ಮಾಡಿಕೊಂಡರು ಕೇವಲ ಬಾಯಿ ಮಾತಿನ ಭರವಸೆ ಆಗುತ್ತಿದೆ. ಕಾರ್ಯರೂಪಕ್ಕೆ ಬರುತ್ತಿಲ್ಲ ಇನ್ನೂ ಮುಂದೆ ನಮ್ಮಿಂದ ಸಾಧ್ಯವಿಲ್ಲ, ಸಂಬಳವಿಲ್ಲದೆ ಕೆಲಸ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಸಿಬ್ಬಂದಿಗಳು  ಸೋಮವಾರ ನಾವು ಡಯಾಲಿಸಿಸ್ ಘಟಕ ಬಂದ್ ಮಾಡುತ್ತೇವೆ ಎಂದು ಸರಕಾರಿ ಆಸ್ಪತ್ರೆಯ ಆಡಳಿತಧಿಕಾರಿಗಳಿಗೆ ಸಿಬ್ಬಂದಿಗಳು ಶುಕ್ರವಾರ ಮನವಿ ನೀಡಿದ್ದಾರೆ.


ನಮಗೆ ಬಿ. ಆರ್. ಎಸ್ ಕಂಪನಿ ನೀಡುವಷ್ಟೇ ಸಂಬಳ ನಾಳೆಯೇ ನೀಡಿದರೆ ಮುಂದುವರಿಯುತ್ತೇವೆ. ಸಂಬಳ ನೀಡದೆ ಇದ್ದರೆ ಸೋಮವಾರ ಹೊನ್ನಾವರ ಘಟಕ ಬಂದ್ ಮಾಡಿ ಕಾರವಾರದಲ್ಲಿ ಜಿಲ್ಲೆಯ ಎಲ್ಲಾ ನೌಕರರು ಸೇರಿ ಮುಸ್ಕರ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.


ಹೊನ್ನಾವರ ತಾಲೂಕಿನಲ್ಲಿ ಅಂದಾಜು 29 ಡಯಾಲಿಸಿಸ್ ಚಿಕಿತ್ಸೆ ಪಡೆಯುವ ರೋಗಿಗಳಿದ್ದು, ಡಯಾಲಿಸಿಸ್ ಘಟಕ ಬಂದಾದರೆ ಈ ರೋಗಿಗಳಿಗೆ ತುಂಬಾ ಸಮಸ್ಯೆಯಾಗಲಿದೆ.  ಸಿಬ್ಬಂದಿಗಳಿಗೆ 6 ತಿಂಗಳುಗಳ ಕಾಲ ಸಮರ್ಪಕ ವೇತನ ಮತ್ತು ಭತ್ಯೆ ಸಿಗದ ಕಾರಣ ರಾಜಿನಾಮೆ ನೀಡುತ್ತಿದ್ದೇವೆ. ಇದೇ ರೀತಿ ಮುಂದುವರಿದಲ್ಲಿ ಡಯಾಲಿಸಿಸ್ ಘಟಕವನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ. ಅಥವಾ ಸಿಬ್ಬಂದಿಗಳ ಕೊರತೆಯಾದಲ್ಲಿ ಡಯಾಲಿಸಿಸ್‌ ಮಾಡುವುದು ಕಷ್ಟವಾಗುತ್ತದೆ, ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ನ್ಯಾಯ ಒದಗಿಸುವ ಮೂಲಕ ಡಯಾಲಿಸಿಸ್ ರೋಗಿಗಳಿಗೆ ನೆರವಾಗಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: ಕೋವಿಡ್ ಸಮಯದಲ್ಲಿಯೂ ಉತ್ತಮ ಸೇವೆ, ಡಯಾಲಿಸಿಸ್ ಘಟಕ ಬಂದಾದರೆ, ಸಹಾಯಹಸ್ತದ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...