ಹೊನ್ನಾವರ : ತಾಲೂಕಿನ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕ ಸೋಮವಾರ ಸಿಬ್ಬಂದಿಗಳ ಪ್ರತಿಭಟನೆ ಹಿನ್ನಲೆ ಡಯಾಲಿಸಿಸ್ ಘಟಕಕ್ಕೆ ಬೀಗ ಹಾಕಲಾಗಿತ್ತು. ಇದರ ಅರಿವಿಗೆ ಇರದ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗದೇ ಪರದಾಟ ಅನುಭವಿಸಿದರು.
ಪ್ರತಿದಿನದಂತೆ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳು ಆಸ್ಪತ್ರೆಗೆ ಬಂದು ಡಯಾಲಿಸಿಸ್ ಘಟಕದ ಎದುರು ತಮ್ಮ ನೋವು ಹೇಳಿಕೊಂಡಿದ್ದಾರೆ. ನಾವು ಕಳೆದ ಮೂರು ವರ್ಷದಿಂದ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದು, ಇಂದು ಸಮಸ್ಯೆ ಆಗುತ್ತಿದೆ. ಒಂದು ದಿನ ತಪ್ಪಿ ಮುಂದೆ ಹೋದರೆ ಜೀವಕ್ಕೆ ಅಪಾಯ ಎನ್ನುವ ರೀತಿ ತೊಂದರೆ ಆಗುತ್ತಿದೆ. ಸಿಬ್ಬಂದಿಗಳಿಗೆ ಸಂಬಳ ನೀಡದ ಕಾರಣ ನಮಗೆ ಈ ಕಷ್ಟ ಒದಗಿಬಂದಿದೆ.
ಸಂಬಂಧ ಪಟ್ಟವರು ಅವರ ಸಮಸ್ಯೆ ಬಗೆಹರಿಸಿಕೊಟ್ಟು, ನಮಗೆ ಅನುಕೂಲ ಮಾಡಿಕೊಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಹೆಚ್ಚಿನದಾಗಿ ಬಡವರೇ ಡಯಾಲಿಸಿಸ್ ಚಿಕಿತ್ಸೆಗೆ ಬರುತ್ತಿದ್ದು, ಒಂದೊಮ್ಮೆ ಇದು ಸ್ಥಗಿತಗೊಂಡಲ್ಲಿ ಖಾಸಗಿ ಆಸ್ಪತ್ರೆಗೆ ಹೋಗುವ ಸಾಮರ್ಥ ನಮ್ಮಲಿಲ್ಲ . ನಮಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಿ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.
shri devaki krishna wash point, karki naka honavar ,contact; sachin mesta 9538529046,8310014860
ಸರಕಾರ ನೀಡಿದ ಸಂಬಳವನ್ನು ಸಿಬ್ಬಂದಿಗಳಿಗೆ ಪರ್ತಿಯಾಗಿ ನೀಡುತ್ತಿಲ್ಲ, ಕೊಡುವ ವೇತನವನ್ನೇ ಕಡಿತಗೊಳಿಸಿ ನೀಡಲಾಗುತ್ತಿದೆ. ಇದು ಯಾಕೆ ಹೀಗೆ ಮಾಡುತ್ತಿದ್ದಾರೆ. ಪರ್ತಿ ವೇತನ ಇಡೀ ಎಂದು ಸಿಬ್ಬಂದಿಗಳು ಪಟ್ಟು ಹಿಡಿದಿದ್ದಾರೆ. ಸಿಬ್ಬಂದಿಗಳಿಗೆ ನೇರ ವೇತನ ನೀಡದೆ ಎಜೆನ್ಸಿ ಮೂಲಕ ನೀಡುತ್ತಿರುವ ಕಾರಣ ಸಂಬಳ ಕಡಿತಗೊಳ್ಳುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
……………………….
ನಮ್ಮ ತಾಲೂಕಿನ ಹೆಚ್ಚಿನವರು ಬಡವರೇ ಆಗಿದ್ದು, ಇಲ್ಲಿ ಚಿಕಿತ್ಸೆಗಾಗಿ ಡಯಾಲಿಸಿಸ್ ಬರುತ್ತಾರೆ. ನನ್ನ ತಾಯಿಯನ್ನು ಕಳೆದ ಕೆಲ ವರ್ಷದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಉತ್ತಮ ರೀತಿಯಲ್ಲಿ ಸಿಬ್ಬಂದಿಗಳು ಕತ್ಯರ್ವ ನಿರ್ವಹಿಸುತ್ತಿದ್ದಾರೆ. ಅವರಿಗೆ ವೇತನ ಸಮಸ್ಯೆ ಬಗೆಹರಿಸಿದರೆ, ಎಲ್ಲವು ಬಗೆಹರಿಯಲಿದೆ
…ಪ್ರಕಾಶ ಶೆಟ್ಟಿ
Leave a Comment