ಹೊನ್ನಾವರ – ತಾಲೂಕಿನ ಗೇರಸೊಪ್ಪ ಉಪ್ಪಿನಗೊಳಿ ನಗರ ದೇವತೆಯಾಗಿರುವ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಿಯ ನೂತನ ಬ್ರಹ್ಮರಥ ಮತ್ತು ಪುಷ್ಪರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ರಥದ ಅಕ್ಷಪೂಜೆಯನ್ನು ನೆರವೇರಿಸಲಾಯಿತು.
ಧಾರ್ಮಿಕ ವಿಧಿವಿಧಾನಗಳನ್ನ ವೈದಿಕರು ಪೂರೈಸಿದರು ಹೆಸರಾಂತ ರಥ ಶಿಲ್ಪಿ ಗಂಗಾಧರ ಆಚಾರ್ಯ ಇಡಗುಂಜಿ ಅವರ ನೇತೃತ್ವದಲ್ಲಿ ಬ್ರಹ್ಮರಥದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಅಕ್ಷಪೂಜೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಗೋವಿಂದ.ಎಸ್.ನಾಯ್ಕ, ಉಪಾಧ್ಯಕ್ಷ ರಮೇಶ ಪುರಂದರ ನಾಯ್ಕ, ಕೋಶಾಧ್ಯಕ್ಷ ಮಂಜುನಾಥ ಮಾದೇವ ನಾಯ್ಕ, ಸದಸ್ಯರಾದ ಮಂಜುನಾಥ ನಾರಾಯಣ ನಾಯ್ಕ, ಮೋಹನ ತಿಪ್ಪಯ್ಯ ನಾಯ್ಕ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
shri devaki krishna wash point, karki naka, honavar ,contact; sachin mesta 9538529046,8310014860
Leave a Comment