ಚಿತ್ರದುರ್ಗ : ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ಮುದ್ವೆ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆಯಲ್ಲಿ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ತಿರಸ್ಕೃತ ಭಾವನೆಯಿಂದ ಕಾಣುತ್ತಿದ್ದರಿಂದ ರೋಸಿ ಹೋದ ಆಪ್ರಾಪ್ತ ಬಾಲಕಿಯೇ ತಂದೆ-ತಾಯಿ ಮತ್ತು ಕುಟುಂಬದ ಸದಸ್ಯರ ಊಟಕ್ಕೆ ವಿಷ ಬೆರೆಸಿರುವುದು ಬಹಿರಂಗವಾಗಿದೆ. ಇದುವರೆಗೆ ಮುದ್ಧೆ ಸಾರು ಊಟ ಮಾಡಿ ಮೃತಪಟ್ಟ ಪ್ರಕರಣದ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ.
12 ಜಿಲೈ 2021ರಂದು ಭರಮಸಾಗರ ಹೋಬಳಿ ಇ ಸಾಮುದ್ರ ಗೊಲ್ಲರಹಟ್ಟಿಯಲ್ಲಿ ರಾಗಿ ಮುದ್ದೆ, ಹೆಸರುಕಾಳು ಸಾಂಬರ್, ಅನ್ನ ಊಟ ಮಾಡಿದ ತಿಪ್ಪನಾಯ್ಕ್ ಸುಧಾಬಾಯಿ, ಗುಂಡಿಬಾಯಿ, ಬಾಲಕಿ ರಮ್ಯ ಮೃತಪಟ್ಟಿದ್ದರು.
ಚಂದ್ರಶೇಖರ್ ಯಾನೆ ರಾಹುಲ್ ಊಟ ಮಾಡಿ ಅಸ್ವಸ್ಥನಾಗಿದ್ದ ನಂತರ ಚೇತರಿಸಿಕೊಂಡ. ಇಡೀ ಪ್ರಕರಣಜಿಲ್ಲೆಯ ಜನರನ್ನೇ ತಲ್ಲಣಗೊಳಿಸಿತು. ಊಟ ಮಾಡಿ ಮೃತಪಟ್ಟರೆ ಎಂಬ ಅನುಮಾನ ಹುಟ್ಟಿಕೊಂಡಿತ್ತು.
ಅಡುಗೆ ಮಾಡಿದ ಅಲ್ಯುಮಿನಿಯಂ ಪಾತ್ರೆ, ವಾಂತಿ, ಆಹಾರ ತಯಾರು ಮಾಡಲು ಬಳಸಿದ್ದ ಎಲ್ಲಾ ಆಹಾರ ಅದಾರ್ಥ ಸಂಗ್ರಹಿಸಿಲಾಗಿತ್ತು. ರಾಗಿಮುದ್ದೆಯಲ್ಲಿ ವಷ ಬೆರೆಸಿರುವ ಬಗ್ಗೆ ವರದಿ ಬಂದಿತ್ತು. ವರದಿ ಬಂದ ಮೇಲೆ ರಾಹುಲ್, ಅ.16 ರಂದು ವಿಷ ಹಾಕಿ ಯಾರೋ ಕೊಲೆ ಮಾಡಿದ್ದಾರೆ. ತನಿಖೆ ನಡೆಸುವಂತೆ ದೂರು ನೀಡಿದರು. ತಕ್ಷಣ ತಂಡ ರಚಿಸಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಪೊಳಿಸರು, ಮನೆಯಲ್ಲಿದ್ದ ಬಾಲಕಿ ವಿಚಾರಿಸಿದಾಗ ವಿಷ ಹಾಕಿರುವುದಾಗಿ ಒಪ್ಪಿಕೊಂಡಳು.
Leave a Comment