ಹೊನ್ನಾವರ; ದೇಶದಲ್ಲಿ ೧೦೦ ಕೋಟಿ ಲಸಿಕೆ ವಿತರಣೆ ಮಾಡಿದಮಹತ್ ಸಾಧನೆಗಾಗಿ ಪ್ರಧಾನಮಂತ್ರಿನರೇಂದ್ರ ಮೋದಿಯವರಿಗೆ ಅಭಿನಂದನೆಸಲ್ಲಿಸಿ, ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿದಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸುವಮೂಲಕ ಸಂಭ್ರಮಾಚರಣೆ ಬಿಜೆಪಿಹೊನ್ನಾವರ ಮಂಡಲದ ವತಿಯಿಂದ ಪಟ್ಟಣದಲಸಿಕಾ ವಿತರಣೆ ಕೇಂದ್ರದಲ್ಲಿ ಶನಿವಾರನಡೆಯಿತು.
ವೈದ್ಯರು, ನರ್ಸ್ಗಳು, ಡಾಟಾ ಎಂಟ್ರಿಸಿಬ್ಬಂದಿಗಳು ಸೇರಿದಂತೆ ಲಸಿಕಾ ವಿತರಣೆಯಲ್ಲಿತೊಡಗಿಕೊಂಡವರಿಗೆ ಶಾಲು ಹೊದೆಸಿಸನ್ನಾನಿಸಿ ಸಿಹಿವಿತರಿಸಿಸಂಭ್ರಮಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷರಾಜೇಶ ಭಂಡಾರಿ ಮಾತನಾಡಿ ಪ್ರಧಾನಿನರೇಂದ್ರ ಮೋದಿಯವರ ನೇತೃತ್ವದಲ್ಲಿ೨೭೮ ದಿನಗಳಲ್ಲಿ ದೇಶದಲ್ಲಿ ೧೦೦ ಕೋಟಿಲಸಿಕೆಯನ್ನು ಉಚಿತವಾಗಿ ವಿತರಿಸಲಾಗಿದೆ.ಹೊನ್ನಾವರ ತಾಲೂಕಿನಲ್ಲಿ ೧ಲಕ್ಷ ೬೧ಸಾವಿರಪ್ರಥಮ ಡೋಸ್ ಲಸಿಕೆ ನೀಡಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಹೆಗಡೆಕರ್ಕಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿನೇತೃತ್ವದ ಕೇಂದ್ರ ಸರ್ಕಾರ ಆತ್ಮನಿರ್ಭರಭಾರತ ಯೋಜನೆಯಡಿ ಉಚಿತವಾಗಿಲಸಿಕೆಯನ್ನು ನೀಡಿದೆ. ೧೦೦ಕೋಟಿ ಸಲಿಕೆ ವಿತರಿಸಿಸಾಧನೆ ಮಾಡುವ ಮೂಲಕ ಕೊರೊನಾವಾರಿಯರ್ಗಳು ಸರ್ಕಾರದ ಗೌರವವನ್ನುಹೆಚ್ಚಿಸಿದ್ದಾರೆ. ಜನಸಮೂಹದ ನಡುವೆತಾಳ್ಮೆಯನ್ನು ಕಾದುಕೊಂಡು ಕೊರೋನಾವಾರಿಯರ್ಗಳು ಲಸಿಕೆಯನ್ನು ವಿತರಿಸಿದ್ದುಅಭಿನಂದನೀಯರಾಗಿದ್ದಾರೆ.
ಬಿಜೆಪಿಯರಾಷ್ಟೀಯ ಅಧ್ಯಕ್ಷರಿಂದ ಹಿಡಿದು ಬೂತ್ ಮಟ್ಟದಕಾರ್ಯಕರ್ತರವರೆಗಿನ ಎಲ್ಲರೂ ಕೇಂದ್ರಸರ್ಕಾರದ ಈ ಮಹತ್ಕಾರ್ಯದಲ್ಲಿಹೆಗಲಿಗೆಹೆಗಲು ಕೊಟ್ಟು ಸಮಾಜಮುಖಿಕೆಲಸಮಾಡಿದರು. ಲಸಿಕೆಯನ್ನು ವಿತರಿಸಲುಆರಂಭಿಸಿದಾಗ ವಿರೋಧ ಪಕ್ಷಗಳುಊಹಾಪೋಹಗಳನ್ನು ಹಬ್ಬಸಿದರು. ಆದರೂಪ್ರಧಾನಿಯವರು ಹೆದರದೇ ನೂರುಕೋಟಿ ಜನರಿಗೆ ಲಸಿಕೆ ನೀಡುವ ಮೂಲಕಜಗತ್ತಿನಲ್ಲಿ ದಾಖಲೆ ಮಾಡಿದ ದೇಶ ಭಾರತಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
shri devaki krishna wash point karki naka honavar contact; sachin mesta 9538529046,8310014860
ಕೊರೊನಾ ವಾರಿಯರ್ಗಳ ಪರವಾಗಿತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಡಾ.ರಾಜೇಶ ಕಿಣಿ ಮಾತನಾಡಿ ಲಸಿಕೆ ವಿತರಿಸುವುದುನಮ್ಮ ಕರ್ತವ್ಯ. ಆದರೂ ಈ ಸಂದರ್ಭದಲ್ಲಿಕೊರೊನಾ ವಾರಿಯರ್ಗಳ ಸೇವೆಯನ್ನುನೆನಪಿಸಿಕೊಳ್ಳುತ್ತಿರುವುದುಅಭಿನಂದನೀಯ. ಆರಂಭದಲ್ಲಿಉಪಕರಣಗಳ ಕೊರತೆ ಇತ್ತು ಎಂದರು.ಪ್ರಧಾನ ಕಾರ್ಯದರ್ಶಿ ಮಂಜುನಾಥನಾಯ್ಕ ಸ್ವಾಗತಿಸಿ ಲಸಿಕೆ ವಿತರಣೆ ನೂರುಕೋಟಿತಲುಪುವಲ್ಲಿ ಆರೋಗ್ಯ ಕಾರ್ಯಕರ್ತರಸೇವೆ ಅತ್ಯಮೂಲ್ಯವಾದುದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದನಾಯ್ಕ, ರಾಜ್ಯ ಪರಿಷತ್ ಸದಸ್ಯ ಎಂ.ಜಿ. ನಾಯ್ಕ,ಜಿಲ್ಲಾ ಉಪಾಧ್ಯಕ್ಷ ಉಮೇಶ ನಾಯ್ಕ, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆಮೇಧಾ ನಾಯ್ಕ, ಪ.ಪಂ.ಸದಸ್ಯರಾದ ನಾಗರಾಜಭಟ್, ವಿಜು ಕಾಮತ, ಸುಜಾತ ಮೇಸ್ತ, ನಿಶಾ ಶೇಟ್, ವಿಶ್ವನಾಥ ಗೊಂಡ, ಸುಭಾಷ ಹರಿಜನ, ಜಿ.ಪಂ. ಮಾಜಿ ಸದಸ್ಯೆಶ್ರೀಕಲಾ ಶಾಸ್ತಿ. ಪ.ಪಂ. ನಾಮನಿರ್ದೇಶಿತಸದಸ್ಯರಾದ ಉಲ್ಲಾಸ ನಾಯ್ಕ, ದತ್ತಾತ್ರೇಯಮೇಸ್ತ, ಎಂ.ಎಸ್.ಹೆಗಡೆ ಕಣ್ಣಿ ಮತ್ತಿತರರು ಉಪಸ್ತಿತರಿದ್ದರು.
Leave a Comment