ಕುಮಟಾ : ಕುಡಿತದ ಚಟ ಹೊಂದಿದ್ದ ಯುವಕ ಕ್ಷಲ್ಲಕ ಕಾರಣಕ್ಕೆ ತಂದೆಯೊAದಿಗೆ ಜಗಳ ತೆಗೆದು, ಕೊನೆಗೆ ಕತ್ತಿಯಿಂದ ಕಡಿದು ಮಾಡಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಸಂತೇಗುಳಿ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ಗೌಡ (55) ಕೊಲೆಯಾದ ದುರ್ದೈವಿಯಾಗಿದ್ದಾನೆ. ಆರೋಪಿ ಶ್ರೀಕಾಂತ ಗೌಡ ಪ್ರತಿನಿತ್ಯ ಕುಡಿದು ಒಂದು ಸಣ್ಣ ಸಣ್ಣ ವಿಷಯಕ್ಕೆ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ನಿನ್ನೆ (ಅ.25) ದಿನ ಸಂಜೆ ಸುಮಾರು 7.30ರ ಸುಮಾರಿಗೆ ಮಗ ಶ್ರೀಕಾಂತ ಕುಡಿದ ಅಮಲಿನಲ್ಲೇ ಮನೆಗೆ ಬಂದಿದ್ದು, ಮನೆಯ ಗೇಟಿನ ಸರಗೋಲನ್ನು ಯಾಕೆ ಹಾಕಿದ್ದೀರಿ ಎಂದು ಕ್ಯಾತೆ ತೆಗೆದಿದ್ದಾನೆ. ಅಪ್ಪ ಮಗನ ಮಧ್ಯೆ ಜಗಳ ಆರಂಭವಾಗಿ, ನೀನು ದಿನಾಲೂ ಹೀಗೆ ಕುಡಿದು ಬಂದು ಜಗಳ ಮಾಡಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ,
ಎಂದು ತಂದೆ ರಾಮಚಂದ್ರ ಹೇಳಿದ್ದಕ್ಕೇ ಸಿಟ್ಟಿಗೆದ್ದ ಮಗ ಅಲ್ಲೆ ವರಾಂಡಾದಲ್ಲಿದ್ದ ಕತ್ತಿಯಿಂದ ತಂದೆಯ ಕುತ್ತಿಗೆ ಮೇಲೆ ಹಲ್ಲೆ ಮಡಿದ್ದು, ತಂದೆ ತೀವ್ರ ರಕ್ತಸ್ರಾವವಾಗಿ ಪ್ರಾಣಬಿಟ್ಟಿದ್ದಾನೆ.
ತಾಯಿ ಸುಮಿತ್ರಾ ರಾಮಚಂದ್ರ ಗೌಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸ್ಥಳಕ್ಕೆ ಬೇಟಿ ನೀಡಿದ ಪಿ.ಎಸ್.ಐ ಆನಂದಮೂರ್ತಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment