ಕುಮಟಾ : ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ವೃದ್ಧೆಯೋರ್ವಳ ಶವ ಪತ್ತೆಯಾಗಿದೆ. ಹುಬ್ಬಳಿಯ ಗೋಕುಲ ರಸ್ತೆಯ ರಾಜಧಾನಿ ಕಾಲೋನಿಯ ನಿವಾಸಿ ವಿನಿತಾ ವಿ ರಾನಡೆ (62) ಮೃತ ವೃದ್ಧೆ ಈಕೆ ಮನೆಯಲ್ಲಿ ನಡೆದ ಮನಸ್ತಾಪದಿಂದ ಬೇಸತ್ತು ಗೋಕರ್ಣದ ಮುಖ್ಯಕಡಲ ತೀರಕ್ಕೆ ಆಗಮಿಸಿ, ಸಮುದ್ರಕ್ಕೆ ಇಳಿದಿದ್ದಾಳೆ.
ನೀರಿನ ಸುಳಿಕೆ ಸಿಕ್ಕಿ ಕೊಚ್ಚಿಹೋಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ಸಾಗಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment