ಯಲ್ಲಾಪುರ :ಕನ್ನಡ ಚಿತ್ರರಂಗದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಪುನೀತ್ ರಾಜ್ ಅಭಿಮಾನಿಗಳು ಶನಿವಾರ ರಾತ್ರಿ ಪಟ್ಟಣದ ಬಸ್ ನಿಲ್ದಾಣ ಬಳಿ ಅಂಬೇಡ್ಕರ್ ವೃತ್ತ ದಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಹೂ ಹಾರ ಹಾಕಿ ಮೊಂಬತ್ತಿ ಬೆಳಗಿಸಿ ಅಶ್ರು ತರ್ಪಣ ಗೈದರು.ಯುವ ಅಭಿಮಾನಿಗಳು ವೃತ್ತದಲ್ಲಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ. ದೀಪ ಬೆಳಗಿಸಿ, ಪುಷ್ಪ ವೃಷ್ಟಿ ಮಾಡಿ ಪುನೀತ್ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿದರು. ನಂತರ ಜೈ, ಪುನೀತ್ ರಾಜ್ ಕುಮಾರ್ ಗೆ ಜೈ, ಯುವರತ್ಮಗೆ ಜೈ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ನೆಚ್ಚಿನ ನಟನ ಅಗಲಿಕೆಯಿಂದ ನೊಂದ ಅಭಿಮಾನಿಗಳು , ಪುನೀತ್ ರಾಜ್ಕುಮಾರ್ ರವರು ಕನ್ನಡ ಚಿತ್ರರಂಗದ ಯೂತ್ ಐಕಾನ್ ಎಂದೇ ಪ್ರಸಿದ್ಧರಾದವರು 46 ವರ್ಷ ಚಿತ್ರರಂಗದಲ್ಲಿ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ನಿಜವಾಗಿಯೂ ಬಡವಾಗಿದೆ ಎಂದು ಅವರ
ಅಭಿಮಾನಿ ಗಳು ಅವರ ಸಾವಿಗೆ ಕಂಬನಿ ಮಿಡಿದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ವ್ಯಾಪಾರಿಗಳು
ಆಟೋ ಚಾಲಕರು,ಸೇರಿದಂತೆ ವಿವಿಧ ವೃತ್ತಿಯಲ್ಲಿ ತೊ ಡಗಿದ ಅಭಿಮಾನಿಗಳು ಸೇರಿ ಮೌನಾಚಾರಣೆ ಮಾಡಿ ಪವರ್ ಸ್ಟಾರ್ ಆತ್ಮಕ್ಕೆ ಶಾಂತಿ ಕೋರಿದರು.
Leave a Comment