• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಒಕ್ಕಲಿಗರ ಸಂಘದ ಆಶ್ರಯದಲ್ಲಿ ಯಶಸ್ವಿಯಾಗಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ – ಕಸ್ತೂರ್ಬಾ ಸ್ಪತ್ರೆಯ ನೇತೃತ್ವದ ಶಿಬಿರದ ಪ್ರಯೋಜನ ಪಡಕೊಂಡ 375 ಕ್ಕೂ ಹೆಚ್ಚು ಮಂದಿ

November 1, 2021 by Vishwanath Shetty Leave a Comment

ಹೊನ್ನಾವರ : ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 375 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.
ತಾಲೂಕಾ ಒಕ್ಕಲಿಗರ ಸಂಘ ಹೊನ್ನಾವರ ಇವರ ಆಶ್ರಯದಲ್ಲಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಉತ್ತರಕನ್ನಡದ ಸಹಭಾಗಿತ್ವದಲ್ಲಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಇವರ ನೇತೃತ್ವದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ತಾಲೂಕಿನ ನಾನಾ ಭಾಗದಿಂದ ಸುಮಾರು 375 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.


ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರರೂ ಕಾರ್ಯಕ್ರಮದ ಮಾರ್ಗದರ್ಶಕರೂ ಆದ ಜಿ.ಯು.ಭಟ್ಟ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ವೈಯ್ಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜಕ್ಕೂ ಏನಾದರೂ ಒಳ್ಳೆಯದನ್ನು ಕೊಡಬೇಕು ಎನ್ನುವ ಮನಸ್ಥಿತಿಯನ್ನು ಎಲ್ಲರೂ ಹೊಂದಬೇಕು.

  • 1635684684916
  • 1635684684922


ಒಕ್ಕಲಿಗರ ಸಂಘದ ಸಾಮರ್ಥ್ಯ ಏನು ಎನ್ನುವುದು ನನಗೆ ತಿಳಿದಿತ್ತು. ಈ ಕಾರ್ಯಕ್ರಮವನ್ನು ಅವರು ಯಶಸ್ವಿಯಾಗಿಸುತ್ತಾರೆ ಎನ್ನುವ ನಂಬಿಕೆ ಇತ್ತು ಅದು ಮೊದಲ ಕಾರ್ಯಕ್ರಮದಲ್ಲಿಯೇ ಸಾಬೀತಾಗಿದೆ ಮುಂದೆಯೂ ಸಂಘ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂದುವರಿಯಲಿ ಎಂದು ಹಾರೈಸಿದರು.


ಕಸ್ತೂರ್ಬಾ ಮಣಿಪಾಲ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಕ್ಷಮಾ ರೈ ಅವರ ನೇತೃತ್ವದ 15 ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ವೈದ್ಯಕೀಯ ತಂಡ ನಿರಂತರ ಆರು ತಾಸುಗಳಿಗೂ ಹೆಚ್ಚು ಕಾಲ ಶಿಬಿರಾರ್ಥಿಗಳನ್ನು ಪರೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಶಿಬಿರದ ನೇತೃತ್ವ ವಹಿಸಿದ್ದ ನೇತ್ರ ತಜ್ಞರಾದ ಡಾ.ಕ್ಷಮಾ ರೈ ಅವರು ಮಾತನಾಡಿ ಕಣ್ಣಿಗೆ ಪೊರೆ ಬಂದು ದೃಷ್ಟಿ ಮಂಜಾಗಿದ್ದರೆ ಅಂತವರನ್ನು ಮಣಿಪಾಲ್ ಗೆ ಕರೆಸಿಕೊಂಡು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತೇವೆ, ಸಕ್ಕರೆ ಖಾಯಿಲೆ, ರಕ್ತದೊತ್ತಡದಂತ ಸಮಸ್ಯೆಯಿಂದ ಬಳಲುತ್ತಿರುವವರು ಅದನ್ನೆಲ್ಲಾ ಕಡಿಮೆ ಮಾಡಿಕೊಂಡು ಬಂದು ಸಹ ಚಿಕಿತ್ಸೆ ಪಡೆಯಬಹುದು ಎಂದರು.

ಹೊನ್ನಾವರ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿ ಅವರು ಒಕ್ಕಲಿಗರ ಸಮಾಜ ಆದಿಚುಂಚನಗಿರಿ ಶ್ರೀ ಮಠಧ ಮಾರ್ಗದರ್ಶನದಲ್ಲಿ ಅಭ್ಯುದಯ ಹೊಂದುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ, ಸರ್ಕಾರದಿಂದ ಸಾರ್ವಜನಿಕರಿಗೆ ಯಾವೆಲ್ಲಾ ಸವಲತ್ತುಗಳು ಸಿಗಲಿದೆಯೋ ಅದನ್ನೆಲ್ಲಾ ಒದಗಿಸಿಕೊಡಲು ನಾವು ಯಾವತ್ತೂ ಉತ್ಸುಕರಾಗಿದ್ದೇವೆ ಎಂದರು.
375 ಮಂದಿಯಲ್ಲಿ 61 ಮಂದಿಯನ್ನು ಕಣ್ಣಿನ ಪೊರೆ ನಿವಾರಣಾ ಚಿಕಿತ್ಸೆಗೆ ಅರ್ಹರೆಂದು ಆಯ್ಕೆಮಾಡಿಕೊಂಡು ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಬರಲು ತಿಳಿಸಲಾಯಿತು. ದಿನಾಂಕ 08-11-2021 ಮತ್ತು 12-11-2021 ಎರಡು ದಿನ ಕ್ಯಾಂಪ್ ಮಾಡಿ ಚಿಕಿತ್ಸೆಗೆ ಆಯ್ಕೆಯಾದವರನ್ನು ಸಂಸ್ಥೆಯ ಬಸ್ ಮೂಲಕ ಮಣಿಪಾಲಕ್ಕೆ ಕರೆಯಿಸಿಕೊಂಡು ಚಿಕಿತ್ಸೆ ನೀಡಿ ಪುನ: ಕರೆತಂದು ಬಿಡಲಾಗುವುದು ಎಂದು ತಿಳಿಸಿದರು.

  • IMG 20211010 WA0066
  • IMG 20211010 WA0065
    shri devaki krishna wash point karki naka honavar contact; sachin mesta 9538529046,8310014860


ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ತಿಮ್ಮಪ್ಪ.ಜಿ.ಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ತಾಲೂಕಾಸ್ಪತ್ರೆಯ ವೈದ್ಯರಾದ ಡಾ.ರಮೇಶ ಗೌಡ, ಜಿಲ್ಲಾಪಂಚಾಯತ ಮಾಜಿ ಸದಸ್ಯರಾದ ಕೃಷ್ಣ.ಜೆ.ಗೌಡ, ಕೆಳಗಿನೂರು ವಿ.ಎಸ್.ಎಸ್.ಅಧ್ಯಕ್ಷರಾದ ಗಣಪಯ್ಯ.ಕೆ.ಗೌಡ ಮುಗಳಿ,ಮಣಿಪಾಲ್ ಆಸ್ಪತ್ರೆಯ ಸಂಯೋಜನಾಧಿಕಾರಿ ರಾಜೇಂದ್ರ ನಾಯ್ಕ, ಮಹಾಬಲ ಗೌಡ ಹಕ್ಕಲಕೇರಿ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಖಜಾಂಚಿ ದಯಾನಂದ ಗೌಡ ಪ್ರಾಸ್ಥಾವಿಕವಾಗಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ವಂದಿಸಿದರು, ಸಂಘದ ನಿರ್ದೇಶಕ ಲಕ್ಷ್ಮೀಕಾಂತ ಗೌಡ ಸ್ವಾಗತಿಸಿ ನಿರ್ವಹಿಸಿದರು. ಸಂಘದ ನಿರ್ದೇಶಕರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಆಸ್ಪತ್ರೆಯ ಸಂಯೋಜನಾಧಿಕಾರಿ ರಾಜೇಂದ್ರ ನಾಯ್ಕ, ವೈಯ್ಯಕ್ತಿಕ ಬೆಳವಣಿಗೆಯ ಜೊತೆಗೆ, ಶಿಬಿರಾರ್ಥಿಗಳನ್ನು ಪರೀಕ್ಷಿಸಿ ಸಲಹೆ ಸೂಚನೆ, ಸವಲತ್ತುಗಳು ಸಿಗಲಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...