ಯಲ್ಲಾಪುರ:ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮೆಲ್ಲರ ನೆಚ್ಚಿನ ನಾಯಕರಾಗಿದ್ದರು. ಅವರು ನಟಿಸಿದ ಚಿತ್ರಗಳನ್ನು ಮನೆ ಮಂದಿಯೆಲ್ಲ ಕುಳಿತು ನೋಡಬಹುದಿತ್ತು. ಇನ್ನೂ ಎಳೆಯರಾದ ಇವರ ಸಾವು ನಮಗೆಲ್ಲ ನೋವು ತಂದಿದೆ. ಎಂದು ಉಮ್ಮಚ್ಗಿ ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು.ಅವರುಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಉಮ್ಮಚ್ಗಿಯ ಗೆಳೆಯರ ಬಳಗ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿಮಾತನಾಡಿದರು. ನಂತರ ನೂರಾರು ಮೇಣದ ಬತ್ತಿ ಬೆಳಗಿಸಿ ಅವರ
ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿದರು
ಈ ಸಂದರ್ಭದಲ್ಲಿ ಪ್ರಮುಖರಾದ ನಾಗಾ ವೆಂಕ್ಟಾ ದೇವಾಡಿಗ, ಗೋವಿಂದ ಬಸಾಪೂರ, ಲಕ್ಷ್ಮಣ ಪೂಜಾರಿ, ಮಣಿಕಂಠ ದೇವಾಡಿಗ,ರಾಜೇಶ್ ಪೂಜಾರಿ, ಮಣಿಕಂಠ ಪೂಜಾರಿ, ನವೀನ,ನಾಗರಾಜ,ಪವನ್, ರಾಘು,ಶಂಭು,ಸತೀಶ್, ಅಣ್ಣಪ್ಪ,ಲಕ್ಷ್ಮಣ ವಾಲೀಕಾರ್,ಸಿರಿ,ಪುಟ್ಟಿ,ಗಣಪತಿ ಪೂಜಾರಿ,ಸತೀಶ್ ಹೆಗಡೆ ಹಿರೇಸರ,ಗಣೇಶ ಹೆಗಡೆ ಉಮ್ಮಚ್ಗಿ . ಗೌತಮ್, ಭರತ್ ಒಡ್ಡರ್ ,ಗೆಳೆಯರ ಬಳಗ ಮತ್ತು ಉಮ್ಮಚ್ಗಿ ಬೈಕ್ ಸ್ಟ್ಯಾಂಡ್ ನ ಎಲ್ಲಾ ಸದಸ್ಯರು, ಊರ ನಾಗರೀಕರು.ಇದ್ದರು
Leave a Comment