ಕೆಂದ್ರ ಸರ್ಕಾರಿ ನೌಕರರಿಗೆ ಕೊರೊನಾ ಸೋಂಕಿನಿAದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಬಯೋಮೆಟ್ರಿಕ್ ಹಾಜರಾತಿಯನ್ನು ನವೆಂಬರ್ 8 ರಿಂದ ಜಾರಿಗೆ ತರಲಾಗುತ್ತಿದೆ. ಪ್ರತಿಯೊಬ್ಬ ನೌಕರರು ಮೊದಲು ಸ್ಯಾನಿಟೈಸರ್ನಲ್ಲಿ ಕೈಸ್ವಚ್ಛಗೊಳಿಸಿಕೊಂಡು ನಂತರ ಬಯೋಮೆಟ್ರಿಕ್ ಬಳಸಬೇಕು.
ಸಾಮಾಜಿಕ ಅಂತರ ಮತ್ತು ಮುಖಕ್ಕೆ ರಕ್ಷಾ ಕವಚ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರಿ ನೌಕರರು ಕೊರೊನಾ ಕಾಲದಲ್ಲಿ ಕಚೇರಿಗಳಿಗೆ ಹಾಜರಾಗುವುದು ಕಷ್ಟವಾಗಿತ್ತು. ಅದಕ್ಕಾಗಿ ಬಯೋಮೆಟ್ರಿಕ್ ಕೈಬಿಡಲಾಗಿತ್ತು.
ಈಗ ಸೋಂಕು ಇಳಿಮುಖ ಗೊಂಡಿರುವುದರಿAದ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ರಾಜ್ಯಗಳಲ್ಲಿ ಇನ್ನೂ ಕೊರೋನಾ ಸೋಂಕು ಕಡಿಮೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಆ ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಿಳಿಸಿದೆ.
Leave a Comment