ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದಲ್ಲಿ ಯ ಲ್ಲಾಪುರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ, ಇತ್ತೀಚೆಗೆ ನಿಧನರಾದ ಉದ್ಯಮಿ, ವೈಟಿಎಸ್ಎಸ್ ಅಧ್ಯಕ್ಷ ಗಜಾನನ ಭಟ್ಟ ಅವರಿಗೆ ನುಡಿ ನಮನ ಕಾರ್ಯ ಕ್ರಮವನ್ನು ರವಿವಾರ ಸಂಜೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಗಜಾನನ ಭಟ್ಟ ಅವರು ತುಂಬಿದ ಕೊಡದಂತಿದ್ದರು. ಅವರ ಅಗಲಿಕೆ ಸತ್ಯ ನಮಗೆ ತಿಳಿದಿದ್ದರೂ ಸಹ ಅವರು ನಮ್ಮ ಮಧ್ಯಯೇ ಇದ್ದಾರೆ ಎಂಬ ಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಅವರ ಕೊಡುಗೆ ಅಪಾರವಾದದ್ದು. ನಾವು ಅವರಂತಾಗಲು ಸಾಧ್ಯವಿಲ್ಲ. ಆದರೆ ಅವರ ತತ್ವಾದರ್ಶಗಳನ್ನು ಪಾಲಿಸುವಂತಾಗಬೇಕು. ನಾನು ಬಿಜೆಪಿ ಸೇರಿದಾಗಿನಿಂದ ಅವರೊಂದಿಗೆ ಉತ್ತಮ ಪರಿಚಯ, ಸಂಬAಧವನ್ನು ಹೊಂದಿದ್ದೆ. ಕಳೆದ ಒಂದು ತಿಂಗಳ ಹಿಂದೆ ಅವರೊಂದಿಗೆ ೧ ಗಂಟೆಗಳ ಕಾಲ ಸಮಯ ಕಳೆದಿದ್ದೆ. ಅವರೊಂದಿಗೆ ಮಾತನಾಡುವಾಗ ಅರಿತ ಒಂದು ವಿಷಯವೆಂದರೆ ಅವರಲ್ಲಿ ಸ್ವಾರ್ಥವೆಂಬ ಭಾವನೆಗೆ ಜಾಗವೇ ಇರಲಿಲ್ಲ. ಅಂತಹ ನಿಷ್ಕಲ್ಮಶ ಮನಸ್ಸು ಅವರದ್ದು. ಅವರ ಅಗಲಿಕೆಯಿಂದಾಗಿರುವ ನೋವನ್ನು ಕಳೆಯುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುವೆ ಎಂದರು.
ಈ ಸಂದರ್ಭದಲ್ಲಿ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ್, ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ರಾಮು ನಾಯ್ಕ,ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲ ಕೃಷ್ಣ ಗಾವಂಕರ್, ಎಂ ಆರ್ ಹೆಗಡೆ, ಜಿ ಎಸ್ ಭಟ್ ಹಳವಳ್ಳಿ,ಶ್ಯಾಮಿಲಿ ಪಾಠಣಕರ್, ಚಂದ್ರಕಲಾ ಭಟ್, ನಮಿತಾ ಬಿಡಿಕರ್,ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment