ಯಲ್ಲಾಪುರ : ನಾನು ಕಳೆದ ೩೪ ವರ್ಷಗಳಿಂದಲೂ ಸಹ ಈ ಕಾರ್ಯಕ್ರಮದಲ್ಲಿ ಅತ್ಯಂತ ಸಂತಸದಿAದ ತಪ್ಪದೇ ಭಾಗವಹಿಸುತ್ತಿದ್ದೇನೆ. ಸರ್ಕಾರ ಮಾಡಬೇಕಾದ ಕಾರ್ಯಕ್ರಮವನ್ನು ಪ್ರಮೋದ ಹೆಗಡೆ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.
ಅವರು ಪಟ್ಟಣದ ಗಾಂಧೀ ಕುಟೀರದಲ್ಲಿ ನಡೆಯುತ್ತಿರುವ ೩೫ನೇ ವರ್ಷದ ಸಂಕಲ್ಪ ಉತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಯಲ್ಲಾಪುರದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನೇಕ ಅವಕಾಶಗಳಿವೆ. ಈ ಕುರಿತು ವಾರ್ತಾ ಇಲಾಖೆಯೊಂದಿಗೆ ಮಾತನಾಡಿ ಸ್ಪಷ್ಟವಾದ ಚಿತ್ರಣಗಳನ್ನು ಅವರಿಗೆ ತಲುಪಿಸಿ ಯಲ್ಲಾಪುರದ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಕಾರ್ಯ ನಡೆಸಲಾಗುವುದು. ೧೦೦ ರಲ್ಲಿ ಪ್ರತಿಶತಃ ೨೫ ರಷ್ಟಾದರೂ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡದಾಗ ಶಾಸಕರಾಗಿ ಆಯ್ಕೆಯಾದಕ್ಕೂ ಸಾರ್ಥಕವಾಗುವುದು ಎಂದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಲೆಯ ಸಿರಿವಂತಿಕೆಯ ಸಂಕಲ್ಪ ಉತ್ಸವದಲ್ಲಿ ಅತ್ಯಂತ ಸಂತಸದಿAದ ಭಾಗಿಯಾಗಿದ್ದೇನೆ. ಸಂಸ್ಕೃತಿಕ ಪ್ರವಾಸೋಧ್ಯಮ ಎನ್ನುವ ಪ್ರಮೋದ ಹೆಗಡೆಯವರ ವಿಭಿನ್ನ ಕಲ್ಪನೆಯ ಕುರಿತು ತಮ್ಮ ಅನುಭವದ ಸಲಹೆ ಸೂಚನೆಗಳನ್ನು ನೀಡಬೇಕು. ಅದನ್ನು ಜಾರಿಗೆ ತರಲು ಸರ್ಕಾರದ ಮಟ್ಟದಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಹೊರಟ್ಟಿಯವರಿಗೂ ನಮ್ಮ ಭಾಗದ ಜನತೆಗೂ ಅವಿನಾಭಾವ ಸಂಬAಧವಿದೆ. ಆದರೆ ಇಂದು ವಿಧಾನ ಪರಿಷತ್ ಸಭಾಧ್ಯಕ್ಷರಾಗಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ನಾವಿಬ್ಬರೂ ಸಹ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನಮ್ಮ ಭಾಗದ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ ಎಂದರು.
ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಹೆಸರೇ ಹೇಳುವಂತೆ ಈ ಕಾರ್ಯಕ್ರಮದ ನಿರ್ವಹಣೆಗೆ ಬಲವಾದ ಸಂಕಲ್ಪವನ್ನು ಮಾಡಿರುವ ಪ್ರಮೋದ ಹೆಗಡೆ ಅವರ ಮನೋಬಲ ನಿಜಾವಾಗಿಯೂ ಶ್ಲಾಘನೀಯ. ಒಂದು ಚಿಕ್ಕ ಸ್ಥಾನದಿಂದ ಇಂದು ರಾಜ್ಯದ ಒಂದು ಶಾಸಕಿಯಾಗಿ ಬೆಳೆದಿರುವುದು, ಅವರಂತಹ ಹಿರಿಯರ ಮಾರ್ಗದರ್ಶನದಿಂದ ಮಾತ್ರ ಸಾಧ್ಯವಾಗಿದೆ. ಆ ಬಗ್ಗೆ ನನಗೆ ಹೆಮ್ಮೆಯಿದೆ. ಕೊರೋನಾದಂತಹ ಕಷ್ಟಕಾಲದಲ್ಲೂ ನಾವು ಇಷ್ಟು ಸುಂದರವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುದು ಖುಷಿಯಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ್, ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಹಾಗೂ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಪ.ಪಂ. ಅಧ್ಯಕ್ಷೆ ಸುನಂದಾ ದಾಸ್, ಉಪಸ್ಥಿತರಿದ್ದರು. ಸಂಕಲ್ಪ ಉತ್ಸವದ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿದರು. ಪ್ರದೀಪ ಯಲ್ಲಾಪುರಕರ ವಂದಿಸಿದರು. ಸುಮಲತಾ ಹಾಗೂ ಚಂದ್ರಹಾಸ ನಾಯ್ಕ ನಿರ್ವಹಿಸಿದರು.
Leave a Comment