ಹೊನ್ನಾವರ; ತಾಲೂಕಿನಿಂದ ನೆರೆ ರಾಜ್ಯಕ್ಕೆ ಯಾವುದೇ ಪರವಾನಗಿ ಇಲ್ಲದೇ ಹತ್ತಾರು ವಾಹನದಲ್ಲಿ ಬಾಕ್ಸೈಟ್, ಹಾಗೂ ಸಿಮೆಂಟ್ ಉದ್ದೇಶಕ್ಕಾಗಿ ಕಲ್ಲು ಸಾಗಾಟ ವರದಿಯಾಗಿದೆ.
ಪಟ್ಟಣದಲ್ಲಿ ಸಾರ್ವಜನಿಕರೇ ವಾಹನ ತಡೆದು ಸಂಭದಿಸಿದ ಇಲಾಖೆಗೆ ಗಣಿ ಮಾಫಿಯಾ ನಡೆಯುತ್ತಿರುವ ಮಾಹಿತಿ ನೀಡಿ ಲೋಡ್ ಆದ ವಾಹನವನ್ನು ತಡೆದಿದ್ದಾರೆ.ಮುಗ್ವಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಡಿ ಜಾಗದಿಂದ ಯಾವುದೇ ಸಮರ್ಪಕವಾದ ಪರವಾನಗಿ ಇಲ್ಲದೇ ಸಾಗಾಟ ಮಾಡುತ್ತಿದ್ದಾಗ ಸ್ಥಳಿಯರು ಎರಡು ವಾಹನ ತಡೆದು ವಿಚಾರಿಸಿದ್ದಾರೆ. ಚಾಲಕರು ಸೂಕ್ತ ಮಾಹಿತಿ ನೀಡದೇ ಇದ್ದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ವಿಚಾರಿಸಿದಾಗ ನೆರೆಯ ಆಂಧ್ರ ಪ್ರದೇಶಕ್ಕೆ ಸಾಗಿಸುವ ಉದ್ದೇಶದಿಂದ ವಾಹನದಲ್ಲಿ ಪರವಾನಗಿ ಇಲ್ಲದೇ ಸಾಗಾಟ ಮಾಡಲಾಗುತ್ತಿದೆ. ಇದನ್ನು ಸಿಮೆಂಟ್ ಹಾಗೂ ಬಾಕ್ಸೈಟ್ ಬಳಸುವ ಉದ್ದೇಶದಿಂದ ಕೊಂಡ್ಯೊಯಲಾಗುತ್ತಿತ್ತು ಎನ್ನುವ ಮಾಹಿತಿ ವರದಿಯಾಗಿದೆ.
ಮಣ್ಣು ತೆಗೆದ ಪ್ರದೇಶವು ಹಾಡಿ ಜಾಗವಾಗಿದ್ದು, ಇಲ್ಲಿಯ ಮಣ್ಣು ಹೊರಗಡೆ ಸಾಗಿಸಲು ಅನುಮತಿ ಇಲ್ಲ. ಆದ್ಯಾಗೂ ಸ್ಥಳಿಯರು ಹೇಳುವಂತೆ ಗಣಿ ಉದ್ದೇಶಕ್ಕೆ ಈ ಪ್ರದೇಶದ ಕಲ್ಲುಗಳನ್ನು ಭಾರೀ ಗಾತ್ರದ ವಾಹನದಲ್ಲಿ ಪ್ರತಿದಿನ ೧೦ಕ್ಕೂ ಮೇಲ್ಪಟ್ಟು ವಾಹನ ಕಳೆದ ಕೆಲ ದಿನದಿಂದ ಸಂಚರಿಸುತ್ತಿದೆ.
ಯಾವುದೇ ಪರವಾನಗಿ ಇಲ್ಲದೇ, ಈ ಮಟ್ಟದಲ್ಲಿ ಮಾಫಿಯಾ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಡಿ.ಎಫ್.ಓ ಗಣಪತಿ ಕೆ., ಎಸಿಎಫ್ ಕೆ.ಟಿ.ಬೊರಯ್ಯ, ಪಿಎಸೈ ಶಶಿಕುಮಾರ್ ಅರಣ್ಯ,ಪೊಲೀಸ್, ಗಣಿ ಇಲಾಖೆಯ ಅಧಿಕಾರಿಗಳು ಆಗಮಿಸಿ ದಾಖಲಾತಿ ಪರೀಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.
Leave a Comment