ಯಲ್ಲಾಪುರ:ಸಮಾಜಕ್ಕೆ ಹಿರಿಯರು ನೀಡಿದ ಕೊಡುಗೆಯನ್ನು ಸ್ಮರಿಸಿ, ಅವರ ಸೇವೆಗೆ ಗೌರವ ನೀಡುವುದು ಉತ್ತಮ ಕಾರ್ಯ ಎಂದು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ ಹೇಳಿದರು.
ಅವರು ತಾಲೂಕಿನ ಇಡಗುಂದಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ, ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್, ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ ಇವರ ಆಶ್ರಯದಲ್ಲ ಹಮ್ಮಿಕೊಂಡಿದ್ದ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಹಲವು ದಶಕಗಳಿಂದ ವಿವಿಧ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯರಾದ ವಿಘ್ನೇಶ್ವರ ಬಿದ್ರೆ, ತಿರುಮಲೇಶ್ವರ ಕೆರೆಗದ್ದೆ, ವೆಂಕಟ್ರಮಣ ಬಿದ್ರೆ ಅವರನ್ನು ಗೌರವಿಸಲಾಯಿತು. ವಿ.ಎನ್.ಭಟ್ಟ ಏಕಾನ ಅಭಿನಂದನಾ ನುಡಿಗಳನ್ನಾಡಿದರು.
ವೇ.ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ದೇವಸ್ಥಾನದ ಟ್ರಸ್ಟಿ ಸೀತಾರಾಮ ಗಾಂವ್ಕಾರ, ಅಭಿನೇತ್ರಿ ಆರ್ಟ್ ಟ್ರಸ್ಟ್ ಮುಖ್ಯಸ್ಥ ನೀಲ್ಕೋಡ ಶಂಕರ ಹೆಗಡೆ ಇತರರಿದ್ದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು.
ನಂತರ ಅಭಿನೇತ್ರಿ ಆರ್ಟ್ ಟ್ರಸ್ಟ್ ಹಾಗೂ ಅತಿಥಿ ಕಲಾವಿದರಿಂದ ಮಹಾಮಲ್ಲ ಕಂಸ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಕಾಂತ ಮೂಡುಬೆಳ್ಳೆ, ಮದ್ದಲೆವಾದಕರಾಗಿ ರಾಘವೇಂದ್ರ ಹೆಗಡೆ, ಚಂಡೆವಾದಕರಾಗಿ ರಾಮನ್ ಹೆಗಡೆ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ನೀಲ್ಕೋಡ ಶಂಕರ ಹೆಗಡೆ, ತಮ್ಮಣ್ಣ ಗಾಂವ್ಕಾರ ಬೀಗಾರ, ಶ್ರೀಧರ ಕಾಸರಕೋಡ, ವಿನಯ ಬೇರೊಳ್ಳಿ, ನಾಗರಾಜ ಭಟ್ಟ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಿ, ಕಾರ್ತಿಕ ಕಣ್ಣಿ, ದೀಪಕ ಭಟ್ಟ ಕುಂಕಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.
Leave a Comment