ಯಲ್ಲಾಪುರ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಲಾಗುತ್ತಿದ್ದ ಸುಮಾರು 7000 ರೂ. ಮೌಲ್ಯದ 166 ಗ್ರಾಂ ಒಣ ಗಾಂಜಾವನ್ನು ಯಲ್ಲಾಪುರ ಪೋಲಿಸ್ ಠಾಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿದ್ರಳ್ಳಿಯ ಬಸ್ ತಂಗುದಾಣದ ಬಳಿ ಮಂಗಳವಾರ ನಡೆದಿದೆ.
ರಾಜಸ್ಥಾನ ಮೂಲದ, ಹಾಲಿ ಮಂಚಿಕೇರಿ ಹೈಸ್ಕೂಲ್ ಬಳಿ ವಾಸವಾಗಿರುವ ರತನ್ಲಾಲ್ ರಾಮಚಂದ್ರ ಶರ್ಮಾ (46) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 166 ಗ್ರಾಂ ಗಾಂಜಾ, 730 ರೂ. ನಗದು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ. ಪ್ರಿಯಾಂಕಾ ನ್ಯಾಮಗೌಡ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ.
Leave a Comment