ಉಡಪಿ : ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ಹೊಳೆಯಲ್ಲಿ ಮುಳಗಿ ಮೃತಪಟ್ಟಿ ಘಟನೆ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಮುಳ್ಳುಗಡ್ಡೆ ಭಟ್ರಾಡಿ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.
ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಈಜಲು ಭಟ್ರಾಡಿ ಎಂಬಲ್ಲಿ ಹೊಳಗೆ ತೆರಳಿದ್ದರು. ಅವರಲ್ಲಿ ಮೂವರು ನೀರು ಪಾಲಾಗಿದ್ದು, ಮೂವರು ಮೃತದೇಹ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿಗಳನ್ನು ಪೆರ್ಡೂರು ಗ್ರಾಮದ ಪಾಡಿಗಾರದ ಸುದರ್ಶನ ಮತ್ತು ಕಿರಣ್ ಹಾಗೂ ಹಿರಿಯಡ್ಕದ ಸೋನಿತ್ ಎಂದು ಗುತಿಸಲಾಗಿದೆ. ಜಾರ ಗ್ರಾಮದ ಕೆಂಚೆ, ಶಿವಪುರ ಮತ್ತು ಕೃಷ್ಣಮೂರ್ತಿ ಮೃತದೇಹ ಮೇಲೆಕ್ಕೆತ್ತುವಲ್ಲಿ ಶ್ರಮಿಸಿದ್ದರು.
ತಹಶೀಲ್ದಾರ ಕೆ.ಪುರಂದರ್, ಹೆಬ್ರಿ ಪೊಲೀಸ್ ಠಾಣೆ ಎಸ್ಐ ಮಹೇಶ್ ತಂಡ ತಾ.ಪಂ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ, ಗ್ರಾ.ಪಂ ಸದಸ್ಯ ಸಂತೋಷ್ ಶೆಟ್ಟಿ ಪಂಜಾಯತ್ ಮಾಜಿ ಅಧ್ಯಕ್ಷೆ ಸುರೇಶ ಶೆಟ್ಟಿ ಶಿವಪುರ, ಮಾಜಿ ಉಪಾಧ್ಯಕ್ಷ ಉದಯ ಕುಮಾರ್, ಶಿವಪುರ ಗ್ರಾ.ಪಂ ಅಧ್ಯಕ್ಷ ಶೇಖರ್ ಶೆಟ್ಟಿ, ಉಪಾಧ್ಯಕ್ಷೆ ಶ್ವೇತಾ ರಘವೇಂದ್ರ ಮೊದಲಾದವರು ಘಡನಾ ಸ್ಥಳಕ್ಕೆ ಬೇಟಿ ನೀಡಿದರು.
Leave a Comment