ಯಲ್ಲಾಪುರ: ಶ್ರೀಗುರು ಸಹಕಾರಿ ಸಂಘ ಆರ್ಥಿಕ ವ್ಯವಹಾರವಲ್ಲದೇ, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುವದರೊಂದಿಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮಾದರಿಯಾಗಿದೆ.ಎಂದು ವಾಯ್ ಟಿ ಎಸ್ ಎಸ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಜಯರಾಮ ಗುನಗಾ ಹೇಳಿದರು.
ಅವರು ಪಟ್ಟಣದ ಶಾರದಾಗಲ್ಲಿಯಲ್ಲಿರುವ ಶಿವಪ್ಪಾಪೂಜಾರಿ ಸಭಾಭವನದಲ್ಲಿ ಶ್ರೀಗುರು ಸಹಕಾರಿ ಸಂಘದ ೪ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಹಾಗೂ ತಮಗೆ ನೀಡಿದ ಸನ್ಮಾನ ಗೌರವವನ್ನು ಸ್ವೀಕರಿಸಿ ಮಾತನಾಡಿ ಇಂದು ನಮ್ಮ ಸಮಾಜದಲ್ಲಿ ಕೆಟ್ಟ ವಿಷಯಗಳು ವೇUವಾಗಿÀ ಪ್ರಚಾರಪಡೆಯುತ್ತೀವೆ. ಆದರೆ ನಾವು ಒಳ್ಳೆಯ ,ಸಮಾಜಮುಖಿ ಕಾರ್ಯಗಳು ಅದಕ್ಕಿಂತ ವೇಗದಲ್ಲಿ ಪ್ರಚಾರ ಪಡೆಯುವಂತೆ ಎಲ್ಲರೂ ಕಾರ್ಯೋನ್ಮೂಖರಾದರೆ ಸಮಾಜ ಸುಧಾರಣೆ ಸಾಧ್ಯವಿದೆ. ನಾನು ಪ್ರಾಂಶುಪಾಲನಾಗಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ ತೃಪ್ತಿ ಇದೆ. ನಾನು ಕಲಿಸಿದ ವಿದ್ಯಾರ್ಥಿ ,ಸಂಘದ ಅಧ್ಯಕ್ಷ ರವಿನಾಯ್ಕ್ಕವರಿಂದ ಸನ್ಮಾನ ಸ್ವೀಕರಿಸುತ್ತಿರುವದು ನನ್ನ ಸಂತಸ ಹೆಚ್ಚಿಸಿದೆ ,ಈ ಸಂಘವು ಜಿಲ್ಲೆಯಾದ್ಯಂತ ಸೇವೆ ನೀಡುವಂತಾಗಲಿ ಎಂದರು.
ಸAಘದ ಅಧ್ಯಕ್ಷ , ಇಂಜೀನೀಯರ್ ರವಿನಾಯ್ಕ ಅಧ್ಯಕ್ಷತೆವಹಿಸಿ ಮಾತನಾಡಿ , ಸಂಘವೂ ಪ್ರಸಕ್ತ ಸಾಲಿನಲ್ಲಿ ೮೦,೨೮೮.೯೦ ರೂ ನಿವ್ವಳ ಲಾಭ ದಲ್ಲಿದ್ದು, ಸರ್ವ ಸದಸ್ಯರು ಗ್ರಾಹಕರು,ಸಿಬ್ಬಂದಿಗಳು ಇತರರ ಸಹಕಾರದಿಂದ ಸಂಘದ ಪ್ರಗತಿ ಸಾಧ್ಯವಾಗಿದೆ ಎಂದರು. ಉಪಾಧ್ಯಕ್ಷ ಹೆಚ್.ಎಲ್ ನಾಯ್ಕ
ನಿರ್ದೇಶಕರಾದ ಆರ್ .ಆಯ್ ನಾಯ್ಕ ,ಗಜಾನನ ನಾಯ್ಕ ,ಮಾತನಾಡಿದರು. ಅಶೋಕ ನಾಯ್ಕ ಸ್ವಾಗತಿಸಿದರು. ಶಿವಾನಂದ ನಾಯ್ಕ ವಂದಿಸಿದರು.ವ್ಯವಸ್ಥಾಪಕಿ ಸಿಂಧೂ ರಾವಳಕರ ವರದಿ ವಾಚಿಸಿದರು.
Leave a Comment