ಹೊನ್ನಾವರ : ತಾಲೂಕಿನ ಮಾವಿನಕುರ್ವಾದ ಹೊಸಾಡ ಅಂಚೆ ಮಾಸ್ತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಠೇವಣಿದಾರರ ಪಾಸ್ ಬುಕ್ನಲ್ಲಿ ಹಣ ಜಮಾ ತೊರಿಸಿ ಇಲಾಖೆಯ ದಾಖಲೆಗಳಲ್ಲಿ ಹಣ ಜಮಾ ತೋರಿಸಿ ಇಲಾಖೆಯ ದಾಖಲೆಗಳಲ್ಲಿ ಹಣ ಜಮಾ ತೋರಿಸದೇ ವಂಚಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜೆಎಂಎಫ್ಸಿ ನ್ಯಾಯಾಲಯ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಕಡ್ಲೆ ಗ್ರಾಮದ ಉಪ್ಲೆಯ ನಿವಾಸಿ ಮಹಾಬಲೇಶ್ವರ (ರವಿ) ಭಂಡಾರಿ ಶಿಕ್ಷೆಗೊಳಗಾದ ಪೋಸ್ಟ್ ಮಾಸ್ಟರ್ ಆಗಿದ್ದಾನೆ. ಈತನ ಮೇಲೆ ದಾಖಲಾಗಿದ್ದ 5 ಪ್ರಕರಣಗಳ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಕುಮಾರ್ ಜಿ.ಯವರು. ವಿಚಾರಣೆ ಶಿಕ್ಷೆ ಪ್ರಕಟಿಸಿದ್ದಾರೆ.
ಅಂಚೆಯವನ ಸಂಚು : ಬ್ರಾಂಚ್ ಪೋಸ್ಟ್ ಮಾಸ್ಟರ್ ಎಂದು ಕಾರ್ಯನಿರ್ವಹಿಸುತ್ತದ್ದ ಆರೋಪಿ 2006ನೇ ಸಾಲಿನಲ್ಲಿ ಸುಭದ್ರಾ ನಾಯ್ಕ, ಗಣಪತಿ ಗೌಡ, ಮಾದೇವಿ ನಾಯ್ಕ, ಗಣಪತಿ ಗೌಡ, ಕರಿಯಮ್ಮ ಗೌಡ, ಇವರೆಲ್ಲರು ತಮ್ಮ ಖಾತೆಯಲ್ಲಿ ಠೇವಣಿ ಇಟ್ಟ ಹಣವನ್ನು ಪಾಸ್ ಪುಸ್ತಕದಲ್ಲಿ ಜಮಾ ತೋರಿಸಿದರೂ ಖಾತೆಗಳಿಗೆ ಜಮಾ ಮಾಡದೇ ತನ್ನ ಸ್ವಂತಕ್ಕೆ ಬಳಸಿಕೊಂಡು ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪಿಡಸ್ಐ ರೇವತಿ ಹಾಗೂ ವೆಂಕಪ್ಪ ನಾಯಕ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಪರವಾಗಿ ಸಹಾಯಕ ಸರ್ಕಾರಿ ವಕೀಲ ವೆಂಕಟೇಶ ಕೆ.ಗೌಡ ವಾದಿಸಿದ್ದರು.
Leave a Comment