ಕಾರವಾರ : ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ತಾಲೂಕಿನ ಮಾಜಾಳಿಯಲ್ಲಿಂದು ನಡೆದಿದೆ.
ಅಂಕೋಲಾ ತಾಲೂಕಿನ ಅವರ್ಸಾದ ಸಂತೋಷ ಅಶೋಕ ಠಾಕ್ಕರಕರ ಬಂಧಿತ ಆರೋಪಿ. ಈತನಿಂದ ಸುಮಾರು 4,31,200 ರೂ. ಮೌಲ್ಯದ 750 ಎಮ್. ಎಲ್. ನ ರಾಯಲ್ ಸ್ಟಾಗ್ ವಿಸ್ಕಿಯ 12 ಬಾಟಲಿಗಳು (ಒಟ್ಟು 9 ಲೀ), 750 ಎಮ್. ಎಲ್.ನ ಗ್ರೀನ್ ಲ್ಯಾಂಡ್ ಕೊಕೊನೆಟ್ ಫೆನ್ಸಿ ಲೇಬಲ್ ಇರುವ ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 756 ಬಾಟಲಿ (ಒಟ್ಟು 567 ಲೀ), 24 ಖಾಲಿ ಮೀನಿನ ಕ್ರೇಟ್ ಹಾಗೂ ಮಧ್ಯ ಸಾಗಾಟಕ್ಕೆ ಬಳಸಿದ ಫಿಶ್ ಕಂಟೇನರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಉತ್ತರಕನ್ನಡ ಜಿಲ್ಲೆ ಕಾರವಾರ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಮಾಜಾಳಿ ತನಿಖಾ ಠಾಣೆಯ ಅಬಕಾರಿ ಉಪನರೀಕ್ಷಕ ಗಂಗಾಧರ ಯು. ಅಂತರಗಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದು, ಸಿಬ್ಬಂದಿಗಳಾದ ಗಣೇಶ ಆನಂದು ನಾಯ್ಕ, ಎಸ್. ಎಸ್. ನಾಗೇಕರಕೆ.ಆರ್. ಪಾವಸ್ಕರ ಹಾಗೂ ಚುನಾವಣೆ ನಿಮಿತ್ತ ತಂಡದ ಅಧಿಕಾರಿ ಸರ್ವೆಶ ನಾಯ್ಕ ಕಾರವಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment