ಯಲ್ಲಾಪುರ: ತಾಲೂಕಿನ ಕಣ್ಣಿಗೆರೆ ಪಂಚಾಯತ ವ್ಯಾಪ್ತಿಯ ಕೃಷ್ಣಗದ್ದೆ ಬಳಿಯ ರೆಸಾರ್ಟ್ ಹತ್ತಿರದಲ್ಲಿ ಚಿರತೆಯೊಂದು ಓಡಾಟ ನಡೆಸಿದೆ.
ಕಳೆದರಡು ದಿನಗಳ ಹಿಂದೆ ಪಟ್ಟಣದ ಗಣ್ಯ ವರ್ತಕರ ಮಗನ ಮದುವೆ ಸ೦ಬ೦ಧ ಉದ್ಯಮಿಯೊಬ್ಬರ ರೆಸಾರ್ಟ್ನಲ್ಲಿ ಔತಣಕೂಟ ಏರ್ಪಡಿಸಿದ್ದರು. ಅದಕ್ಕಾಗಿ ಹಾಕಿದ್ದ ಪೆಂಡಾಲ್ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಸಿದ್ಧಗೊಳಿಸುತ್ತಿದ್ದ ವೇಳೆ ಕೆಲಸಗಾರರ ಕಣ್ಣಿಗೆ ಮುಂಜಾನೆ. 3-30 ಕತ್ತಲಾವರಿಸಿದ್ದ ಸಮಯದಲ್ಲಿ ಪ್ರಾಣಿಯೊಂದು ನಡೆದು ಸಾಗುವುದನ್ನು ಕಂಡಿದ್ದಾರೆ. ಸ್ವಲ್ಪ ದೂರ ಹೋದ ನಂತರ ಮೊಬೈಲ್ ಬೆಳಕಿನಲ್ಲಿ ನೋಡಿದರೆ ಚಿರತೆ ಗಂಭಿರ ಹೆಜ್ಜೆ ಹಾಕುತ್ತ ಸಾಗಿದ್ದನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಇಂತಹ ದಟ್ಟಡವಿಯಲ್ಲಿ ಕಾಡುಪ್ರಾಣಿಗಳ ಓಡಾಟ ಸಹಜ ಈಗಾಗಲೆ ಭತ್ತ ಕಟಾವಿಗೆ ಬಂದಿದ್ದು ಆನೆ ಸಾಗುವ ಮಾರ್ಗವು ಇದೇ ವ್ಯಾಪ್ತಿಗೆ ಬರುತ್ತದೆ. ಅದಕ್ಕಾಗಿ ರೈತರ ಬೆಳೆ ನಾಶವಾಗದಂತೆ ಅರಣ್ಯ ಇಲಾಖೆಯಿಂದ ಬೆದರಿಸಲು ಗರ್ನಲ್ ನೀಡಲಾಗಿದೆ ಮತ್ತು ಕಾಡುಪ್ರಾಣಿಗಳ ಓಡಾಟದ ಬಗ್ಗೆಯು ಸ್ಥಳೀಯರು ಎಚ್ಚರದಿಂದಿರಬೇಕೆಂದು ಮಾಹಿತಿ ನೀಡಲಾಗಿದೆ. ಇದು ಕಾಳಿ ನದಿ ತಟದ ಅಭಯಾರಣ್ಯದ ವ್ಯಾಪ್ತಿಯಲ್ಲಿದ್ದು ಕಾಡುಪ್ರಾಣಿಗಳು ಓಡಾಟ ನಡೆಸುತ್ತವೆ. ಸ್ಥಳೀಯರಿಗೆ ಇದರ ಮಾಹಿತಿ ಇದೆ ಆದರೆ ರಾತ್ರಿವೇಳೆಯಲ್ಲಿ ಸಂಚರಿಸುವ ಹೊರಗಿನ ಊರಿನವರಿಗೆ ಎರಡು ಚೆಕ್ ಪೋಸ್ಟ್ ಗಳಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಗಳು ಎಚ್ಚರಿಕೆ ನೀಡಿ ಕಳಿಸುತ್ತಾರೆಎಂದು ಅರಣ್ಯಧಿಕಾರಿಗಳು ತಿಳಿಸಿದ್ದಾರೆ.
Leave a Comment