ಯಲ್ಲಾಪುರ :ಯಲ್ಲಾಪುರದಂತಹ ಚಿಕ್ಕ ಊರಿನಲ್ಲಿ ವಿದ್ಯಾರ್ಥಿಗಳಿಗೆ ಐ.ಎ.ಎಸ್., ಕೆ.ಎ.ಎಸ್. ಎಂಬುದು ಗಗನ ಕುಸುಮ ಎಂಬ ಭಾವನೆಯಿದೆ. ಆದರೆ ಸಾಧಿಸುವ ಛಲ, ನಿರ್ದಿಷ್ಟ ಗುರಿ, ಸತತ ಪ್ರಯತ್ನ ಇದ್ದರೆ ಸ್ಫರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸನ್ನು ಕಾಣಬಹುದು. ಸ್ಫರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸಲು ನಮ್ಮ ಸ್ವಯಂ ಸಂಸ್ಥೆಯ ವತಿಯಿಂದ ಆಸಕ್ತ ವಿಧ್ಯಾರ್ಥಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನವನ್ನು ಯಾವುದೇ ಅಧಿಕ ಫಲಾಪೇಕ್ಷೆಗಳಿಲ್ಲದೆ ನೀಡಲಾಗುತ್ತಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಹಾಗೂ ಸ್ವಯಂ ಸಂಸ್ಥೆ ಅಧ್ಯಕ್ಷ ಎಸ್.ಎಂ.ಹೆಗಡೆ ಗೌರಿಬಣಗಿ ಹೇಳಿದರು.
‘ಸ್ವಯಂ' ಸ್ಫರ್ಧಾತ್ಮಕ ಪರಿಕ್ಷೆಗಳ ತರಬೇತಿ ಸಂಸ್ಥೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸ್ಫರ್ಧಾತ್ಮಕ ಪರಿಕ್ಷೆಗಳ ಜಾಗ್ರತಿ ಕಾರ್ಯಾಗಾರ ಉಪನ್ಯಾಸ ನೀಡಿ ಮಾತನಾಡಿದ ಅಂತಯೇ ಆಸಕ್ತ ವಿದ್ಯಾರ್ಥಿಗಳಿಗೆ ಕೇವಲ ಮಾಹಿತಿಯನ್ನಲ್ಲದೇ, ಮಾರ್ಗದರ್ಶನ ನೀಡುವ ಕಾರ್ಯ ನಮ್ಮಲ್ಲಿ ಮಾಡಲಾಗುತ್ತದೆ. . ಈ ಬಾರಿ ಆನ್ಲೈನ್ ಹಾಗೂ ಭೌತಿಕ ತರಗತಿಗಳ ಮೂಲಕ ತರಬೇತಿ ಪಡೆಯಬಹುದಾಗಿದೆ. ಸ್ವಯಂ ಈ ಮೂಲಕ ಒಂದು ಅವಕಾಶದ ಹೆಬ್ಬಾಗಿಲನ್ನು ತೆರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪರೀಕ್ಷೆಗಳಿಗಾಗಿ ಯಾವುದೋ ದೇಶದ ಯಾವುದೋ ಘಟನೆಗಳ ಬಗ್ಗೆ ಓದುವ, ಬರೆಯುವ ನಾವು, ನಮ್ಮ ತಾಲೂಕು-ಜಿಲ್ಲೆಗಳಲ್ಲಿ ಏನು ವಿದ್ಯಮಾನಗಳು ನಡೆಯುತ್ತಿವೆ ಎಂಬುದನ್ನು ಅರೆತುಕೊಳ್ಳುವ ಆಸಕ್ತಿಯನ್ನೇ ತೋರುವುದಿಲ್ಲ. ಆದ್ದರಿಂದ ದಿನಪತ್ರಿಕೆಗಳನ್ನು, ಪುಸ್ತಕಗಳನ್ನು ಓದುವ, ಕಠಿಣ ಶ್ರಮದೊಂದಿಗೆ ಅಭ್ಯಾಸ ಮಾಡುವ ಮನೋಬಲ ಹೊಂದುವ ವಿದ್ಯಾರ್ಥಿಗಳು ಮಾತ್ರ ಈ ಕ್ಷೇತ್ರಕ್ಕೆ ಕಾಲಿಡಬೇಕು. ಕೇವಲ ಸಮಯ ಕಳೆಯಲು ಬಯಸುವವರಿಗೆ ಬೇರೆ ದಾರಿಗಳಿವೆ. ಅಂತವರಿಗೆ ನಾಗರಿಕ ಪರೀಕ್ಷೆಗಳು ಸೂಕ್ತವಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡಿ.ಡಿ.ಪಿ.ಐ. ಕೆ.ಟಿ.ಭಟ್ಟ, ಸ್ವಯಂ ಸಂಸ್ಥೆಯ ಶಿರಸಿ ಶಾಖೆಯ ಅಧ್ಯಕ್ಷ ಆರ್.ಎಸ್.ಹೆಗಡೆ, ಸ್ವಯಂನ ಶಿರಸಿ ಉಪಾಧ್ಯಕ್ಷ ಶ್ರೀಕಾಂತ ಹೆಗಡೆ ವೇದಿಕೆಯಲ್ಲಿದ್ದರು. ಉಪನ್ಯಾಸಕ ಡಿ.ಜಿ.ಥಾಪಸ್ ಸ್ವಾಗತಿಸಿದರು. ಉಪನ್ಯಾಸಕಿ ಸುರೇಖಾ ತಡವಲ್ ವಂದಿಸಿದರು. ಪೃಥ್ವಿ ಗಾಂವ್ಕಾರ್ ನಿರ್ವಹಿಸಿದರು.
Leave a Comment