• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ಜಾಗ್ರತಿ ಕಾರ್ಯಾಗಾರ

December 8, 2021 by Jayaraj Govi Leave a Comment

ಯಲ್ಲಾಪುರ :ಯಲ್ಲಾಪುರದಂತಹ ಚಿಕ್ಕ ಊರಿನಲ್ಲಿ ವಿದ್ಯಾರ್ಥಿಗಳಿಗೆ ಐ.ಎ.ಎಸ್.‌, ಕೆ.ಎ.ಎಸ್.‌ ಎಂಬುದು ಗಗನ ಕುಸುಮ ಎಂಬ ಭಾವನೆಯಿದೆ. ಆದರೆ ಸಾಧಿಸುವ ಛಲ, ನಿರ್ದಿಷ್ಟ ಗುರಿ, ಸತತ ಪ್ರಯತ್ನ ಇದ್ದರೆ ಸ್ಫರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸನ್ನು ಕಾಣಬಹುದು. ಸ್ಫರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸಲು ನಮ್ಮ ಸ್ವಯಂ ಸಂಸ್ಥೆಯ ವತಿಯಿಂದ ಆಸಕ್ತ ವಿಧ್ಯಾರ್ಥಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನವನ್ನು ಯಾವುದೇ ಅಧಿಕ ಫಲಾಪೇಕ್ಷೆಗಳಿಲ್ಲದೆ ನೀಡಲಾಗುತ್ತಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಹಾಗೂ ಸ್ವಯಂ ಸಂಸ್ಥೆ ಅಧ್ಯಕ್ಷ ಎಸ್.ಎಂ.ಹೆಗಡೆ ಗೌರಿಬಣಗಿ ಹೇಳಿದರು.

‘ಸ್ವಯಂ' ಸ್ಫರ್ಧಾತ್ಮಕ ಪರಿಕ್ಷೆಗಳ ತರಬೇತಿ ಸಂಸ್ಥೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸ್ಫರ್ಧಾತ್ಮಕ ಪರಿಕ್ಷೆಗಳ ಜಾಗ್ರತಿ ಕಾರ್ಯಾಗಾರ ಉಪನ್ಯಾಸ ನೀಡಿ ಮಾತನಾಡಿದ ಅಂತಯೇ ಆಸಕ್ತ ವಿದ್ಯಾರ್ಥಿಗಳಿಗೆ ಕೇವಲ ಮಾಹಿತಿಯನ್ನಲ್ಲದೇ, ಮಾರ್ಗದರ್ಶನ ನೀಡುವ ಕಾರ್ಯ ನಮ್ಮಲ್ಲಿ ಮಾಡಲಾಗುತ್ತದೆ. . ಈ ಬಾರಿ ಆನ್ಲೈನ್ ಹಾಗೂ ಭೌತಿಕ ತರಗತಿಗಳ ಮೂಲಕ ತರಬೇತಿ ಪಡೆಯಬಹುದಾಗಿದೆ. ಸ್ವಯಂ ಈ ಮೂಲಕ ಒಂದು ಅವಕಾಶದ ಹೆಬ್ಬಾಗಿಲನ್ನು ತೆರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪರೀಕ್ಷೆಗಳಿಗಾಗಿ ಯಾವುದೋ ದೇಶದ ಯಾವುದೋ ಘಟನೆಗಳ ಬಗ್ಗೆ ಓದುವ, ಬರೆಯುವ ನಾವು, ನಮ್ಮ ತಾಲೂಕು-ಜಿಲ್ಲೆಗಳಲ್ಲಿ ಏನು ವಿದ್ಯಮಾನಗಳು ನಡೆಯುತ್ತಿವೆ ಎಂಬುದನ್ನು ಅರೆತುಕೊಳ್ಳುವ ಆಸಕ್ತಿಯನ್ನೇ ತೋರುವುದಿಲ್ಲ. ಆದ್ದರಿಂದ ದಿನಪತ್ರಿಕೆಗಳನ್ನು, ಪುಸ್ತಕಗಳನ್ನು ಓದುವ, ಕಠಿಣ ಶ್ರಮದೊಂದಿಗೆ ಅಭ್ಯಾಸ ಮಾಡುವ ಮನೋಬಲ ಹೊಂದುವ ವಿದ್ಯಾರ್ಥಿಗಳು ಮಾತ್ರ ಈ ಕ್ಷೇತ್ರಕ್ಕೆ ಕಾಲಿಡಬೇಕು. ಕೇವಲ ಸಮಯ ಕಳೆಯಲು ಬಯಸುವವರಿಗೆ ಬೇರೆ ದಾರಿಗಳಿವೆ. ಅಂತವರಿಗೆ ನಾಗರಿಕ ಪರೀಕ್ಷೆಗಳು ಸೂಕ್ತವಲ್ಲ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡಿ.ಡಿ.ಪಿ.ಐ. ಕೆ.ಟಿ.ಭಟ್ಟ, ಸ್ವಯಂ ಸಂಸ್ಥೆಯ ಶಿರಸಿ ಶಾಖೆಯ ಅಧ್ಯಕ್ಷ ಆರ್.ಎಸ್.ಹೆಗಡೆ, ಸ್ವಯಂನ ಶಿರಸಿ ಉಪಾಧ್ಯಕ್ಷ ಶ್ರೀಕಾಂತ ಹೆಗಡೆ ವೇದಿಕೆಯಲ್ಲಿದ್ದರು. ಉಪನ್ಯಾಸಕ ಡಿ.ಜಿ.ಥಾಪಸ್ ಸ್ವಾಗತಿಸಿದರು. ಉಪನ್ಯಾಸಕಿ ಸುರೇಖಾ ತಡವಲ್ ವಂದಿಸಿದರು. ಪೃಥ್ವಿ ಗಾಂವ್ಕಾರ್ ನಿರ್ವಹಿಸಿದರು.

Related Posts :

ಸ್ವದ್ಯೋಗದಿಂದ ಕ್...
ವಿದ್ಯಾರ್ಥಿಗಳ ವಿ...
ಹೆಬ್ಬಾರ್ ಸಚಿವರಾ...
15 ರಿಂದ 18 ವರ್ಷ ವಯಸ್...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,399,344 visitors

Footer

JSW has proposed another port at Honavar

July 26, 2021 By Sachin Hegde

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

July 4, 2022 By Deepika

ಜಿಮ್ ಸ್ಥಾಪನೆಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

July 4, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.