ಯಲ್ಲಾಪುರ : ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಅಪರಾಧ ತಡೆ ಮಸಾಚಾರಣೆ ನಿಮಿತ್ತ ತಾಲ್ಲೂಕಿನ ಎಲ್ಲ ಜುವೆಲ್ಲರಿ ಶಾಪ್ ಮಾಲೀಕರ ಸಭೆ ಕರೆದು ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಪೋಲಿಸ್ ನಿರೀಕ್ಷಕ ಸುರೇಶ ಯಳ್ಳೂರ್ ಸೂಚನೆ ನೀಡಿದರು.
ಶಾಪ್ ಮಾಲಿಕರಿಗೆ ಕಳ್ಳತನ ಮಾಡಿದ ಹಾಗೂ ಅಪರಿಚಿತರಿಂದ ಬಂಗಾರ ಸ್ವೀಕರಿಸಬಾರದು, ಅಂಗಡಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಉತ್ತಮ ಕಂಪನಿಯ CCTV ಅಳವಡಿಕೆ, ಯಾವುದೇ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅವರ ಸಂಪೂರ್ಣ ಮಾಹಿತಿ ತಿಳಿದುಕೊಂಡು ದಾಖಲಾತಿ ಪಡೆದುಕೊಳ್ಳುವುದು ಹಾಗೂ ಅಪರಿಚಿತರನ್ನು ಕೆಲಸಕ್ಕೆ ಇಟ್ಟುಕೊಂಡು ಮೋಸ ಹೋಗದಂತೆ, ಜುವೆಲ್ಲರಿ ಶಾಪನ್ನು ರಾತ್ರಿ ವೇಳೆ ಬಂದ್ ಮಾಡುವಾಗ ಅದರಲ್ಲಿ ಬಂಗಾರದ ಆಭರಣಗಳು ಇಡದೇ ಅದನ್ನು ಮನೆಗೆ ಕೊಂಡೊಯ್ಯುವುದು, ಬಂಗಾರದ ವ್ಯವಹಾರಗಳನ್ನು ಮಾಡುವಾಗ ದಾಖಲಾತಿಗಳನ್ನು ಇಟ್ಟುಕೊಳ್ಳುವುದು, ಬಂಗಾರದ ಅಂಗಡಿಯಲ್ಲಿ ಸಾಧ್ಯವಾದರೆ ಯಾವಾಗಲೂ ಇಬ್ಬರು ಇರುವಂತೆ ನೋಡಿಕೊಳ್ಳುವುದು ಸೇರಿದಂತೆ ಸುರಕ್ಷತೆ ಬಗ್ಗೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಈ ಸಭೆಯಲ್ಲಿ ಪಿಎಸ್ಐ ಮಂಜುನಾಥ ಗೌಡರ್, ಪ್ರಿಯಾಂಕ ನ್ಯಾಮಗೌಡ, ಸಿಬ್ಬಂದಿಗಳಾದ ನಾಗಪ್ಪ, ಶಫೀ ಶೇಖ, ಬಸವರಾಜ ಹಗರಿ, ಗಜಾನನ ನಾಯ್ಕ ಹಾಗೂ ತಾಲ್ಲೂಕಿನ ಎಲ್ಲ ಜುವೆಲ್ಲರಿ ಶಾಪ್ನ ಮಾಲೀಕರು ಇದ್ದರು.
Leave a Comment