ಯಲ್ಲಾಪುರ : ವ್ಯವಹಾರಿಕ ಜೀವನದಲ್ಲಿ ವೃತ್ತಿಪರತೆ ಅವಶ್ಯವಾಗಿ ಬೇಕೇ ಬೇಕು. ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು. ಉತ್ತಮ ಶಿಕ್ಷಣ ಪಡೆಯಲು ವೈಟಿಎಸ್ಎಸ್ ನಂತಹ ಶಿಕ್ಷಣ ಸಂಸ್ಥೆಗಳು ನೆರವಾಗುತ್ತವೆ ಎಂದು ದಾವಣಗೇರೆಯ ಪೂಜ್ಯ ನಿಶ್ಚಲಾನಂದ ಸ್ವಾಮಿಗಳು ನುಡಿದರು.
ಅವರು ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಸಂಸ್ಥೆಯ ನೂತನ ಕಟ್ಟಡದ ಪ್ರವೇಶ ಕರ್ಯಕ್ರಮದ ಧರ್ಮಿಕ ಕರ್ಯದಲ್ಲಿ ಆಶರ್ವಚನ ನೀಡಿದರು. ಕೈಗಾರಿಕೆ ಮತ್ತು ಇನ್ನಿತರ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವವರಿಗೆ ಶಿಕ್ಷಣ ಅವಶ್ಯವಾಗಿದೆ. ಆ ಕರ್ಯವನ್ನು ಶಿಕ್ಷಣ ಸಂಸ್ಥೆಗಳು ನರ್ವಹಿಸುತ್ತವೆ ಈ ಸಂಸ್ಥೆಯ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದವರ ಅಂದಿನ ಉಪಸ್ಥಿತಿ ಮತ್ತು ಇಂದಿನ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಅಂದಿನ ಅಧ್ಯಕ್ಷರಾದ ಗಜಾನನ ಭಟ್ಟ ಅವರು ಸಮರ್ಪಣಾ ಮನೋಭಾವದಿಂದ ವೈಟಿಎಸ್ಎಸ್ ಸಂಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹೀಗಾಗಿ ಸಂಸ್ಥೆಯ ಅಭಿವೃದ್ಧಿಪಥದಲ್ಲಿ ಸಾಗಿದೆ ಎಂದರಲ್ಲದೇ ಹೊಸ ಹೊಸ ತಂತ್ರಜ್ಞಾನಗಳು ಇಂದಿನ ಆಧುನಿಕ ಯುಗದಲ್ಲಿ ಬರುತ್ತಿವೆ. ವಿದ್ಯರ್ಥಿಗಳಿಗೆ ಹೊಸತನ ಬೇಕು. ಹೊಸದನ್ನು ಅಳವಡಿಸಿಕೊಳ್ಳಬೇಕು. ಓದಿನಲ್ಲಿ ಹಿಂದಿರುವ ವಿದ್ಯರ್ಥಿಗಳನ್ನು ಸಮಾನ ದೃಷ್ಟಿಯಲ್ಲಿ ಕಂಡು ಅವರನ್ನು ಮೇಲೆ ತರುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು
ಆಡಳಿತ ಮಂಡಳಿ ನರ್ದೇಶಕರಾದ ರಾಜಾಪ್ರಸಾದ ಭಟ್ಟ, ರಾಜು ಬಾಳಗಿ, ಸುರೇಶ ಪೈ, ವಿನಾಯಕ ಪೈ, ಸದಾನಂದ ದೇಸಾಯಿ, ಬಾಲಕೃಷ್ಣ ನಾಯಕ, ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ, ಮುಂತಾದವರು ಇದ್ದರು.
ಆಡಳಿತ ಮಂಡಳಿ ನಿರ್ದೇಶಕ ದಿಲೀಪ ಭಟ್ಟ ಧರ್ಮಿಕ ಕರ್ಯದ ಯಜಮಾನತ್ವ ವಹಿಸಿದ್ದರು. ವಿ.ನಾರಾಯಣ ಪುರಾಣಿಕ ಹಾಗೂ ಸಂಗಡಿಗರು ಧರ್ಮಿಕ ಕರ್ಯವನ್ನು ನಡೆಸಿಕೊಟ್ಟರು.
ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಸದಾನಂದ ದೇಸಾಯಿ ಶ್ರೀಗಳನ್ನು ಪರಿಚಯಿಸಿದರು. ಸಹಕಾರ್ಯದರ್ಶಿ ರವಿ ಶಾನಭಾಗ್ ಸ್ವಾಗತಿಸಿ, ನಿರೂಪಿಸಿದರು, ನಿರ್ದೇಶಕ ನಾಗರಾಜ ಮದ್ಗುಣಿ ವಂದಿಸಿದರು.
Leave a Comment