ಯಲ್ಲಾಪುರ: ಯಲ್ಲಾಪುರದಂತಹ ಶಾಂತ ಪಟ್ಟಣದಲ್ಲಿ ಗೂಂಡಾಗಿರಿಯಿAದ ಅಂಗಡಿಯ ಕಟ್ಟಡವನ್ನು ನೆಲಸಮಗೊಳಿಸಿರುವುದು ವ್ಯಾಪಾರಸ್ಥರಲ್ಲಿ ಭಯ ಉಂಟುಮಾಡಿದೆಎಂದು ಧ್ವÀಂಸಗೊAಡ ನಕ್ಷತ್ರ ಮೊಬೈಲ್ಸ್ ಹಾಗೂ ಜನತಾ ಕೋಲ್ಡ್ರಿಂಕ್ಸ್ ಅಂಗಡಿಯ ಮಾಲಿಕರಾದ ನಾಗರಾಜ ಬಾಬು ನಾಯ್ಕ ಹಾಗೂ ಚಂದ್ರಶೇಖರ ನಾಯ್ಕ ಹೇಳಿದರು.
ಅವರು ಸೋಮವಾರ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮೊದಲು ಅದೇ ಸ್ಥಳದಲ್ಲಿ ಬಾಡಿಗೆಗೆ ಅಂಗಡಿ ನಡೆಸುತ್ತಿದ್ದೆವು. ೨೦೦೮ ರಲ್ಲಿ ಕೋರ್ಟ್ ಮುಖಾಂತರ ಮೌಲ್ಯಮಾಪನದಂತೆ ೬.೪೦ ಲಕ್ಷ ಹಣವನ್ನು ನೀಡಿ ಯಲ್ಲವ್ವ ಉದ್ದಪ್ಪ ಮಂಡಗೊಡ್ಲಿ ಅವರ ಕುಟುಂಬದವರಿAದ ರಾಜಿ ಮುಖಾಂತರ ನಮ್ಮ ತಂದೆಯವರಾದ ಬಾಬು ಪರಮೇಶ್ವರ್ ನಾಯ್ಕ ಅವರು ಖರೀದಿಸಿರುತ್ತಾರೆ. ಕಾರಣಾಂತರಗಳಿAದ ಜಾಗದ ಆರ್.ಟಿ.ಸಿ. ರೆಜಿಸ್ಟ್ರೇಷನ್ ಮಾಡಿಸಲು ಸಾಧ್ಯವಾಗದೇ ಹೋಗಿದ್ದು, ಈ ಕುರಿತು ೨೦೧೭ ರಲ್ಲಿ ಕಾನೂನು ರೀತಿಯಲ್ಲಿ ಜಾಗದ ಡಿಕ್ರಿ ಮಾಡಿಕೊಡಬೇಕೆಂದು ಕೋರ್ಟಗೆ ಅರ್ಜಿಯನ್ನು ಸಹ ಸಲ್ಲಿಸಿದ್ದೇವೆ.
ಈ ಕುರಿತು ಪ್ರಕರಣವು ಯಲ್ಲಾಪುರದ ಸಿವಿಲ್ ನ್ಯಾಯಾಲಯದಲ್ಲಿದ್ದು,ವಿಚಾರಣೆಗೆ ಹಾಜರಾಗುತ್ತಾ ಇದ್ದೇವೆ , ಅದಾಗ್ಯೂ ಹಳೆಯ ಮಾಲಿಕರ ಕುಟುಂಬಸ್ಥರೆನ್ನಲಾದ ಉದಯ ಕಲ್ಲೊಳ್ಳಿ ಮಂಡಗೊಡ್ಲಿ, ಭರತ್ ಮಂಡಗೊಡ್ಲಿ, ಗಣೇಶ್ ಮಂಡಗೊಡ್ಲಿ ಹಾಗೂ ಅವರ ೧೫ ಸಹಚರರು ಯಾವುದೇ ಮುನ್ಸೂಚನೆ ನೀಡದೆ, ಕೋರ್ಟ್ನಲ್ಲಿ ಅಹವಾಲು ಸಲ್ಲಿಸದೇ, ಏಕಾ ಏಕಿ ಗೂಂಡಾಗಳAತೆ ಬಂದು ಶುಕ್ರವಾರ ರಾತ್ರಿ ಅಂಗಡಿ ಧ್ವಂಸಗೊಳಿಸಿದ್ದಾರೆ.
ನಾವು ಪೋಲಿಸ್ ಸಹಾಯ ಪಡೆದಿದ್ದರಿಂದ ಆ ಕ್ಷಣಕ್ಕೆ ಅವರಿಂದ ಅಂಗಡಿಗೆ ಹನಿಮಾಡಬಾರದೆಂದು ಮುಚ್ಚಲಿಕೆಬರೆಯಿಸಿಕೊಂಡು ಪೊಲೀಸರು ಬಿಟ್ಟಿದ್ದರು ಆದರೆ ಮತ್ತೆ ಸೋಮವಾರ ಬೆಳಗಿನಜಾವ ೪.೩೦ ರ ಸುಮಾರಿಗೆ ನಾವು ಅಂಗಡಿಯಲ್ಲಿ ಮಲಗಿದ್ದಾಗ ಅಂಗಡಿಯ ಹಿಂದಿನ ಬಾಗಿಲಿನಿಂದ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿ ಲಾರಿಯ ಸಹಾಯದಿಂದ ಅಂಗಡಿಯನ್ನು ಕೆಡವಿದ್ದಾರೆ. ಇದರಿಂದ ನಮಗೆ ಅಂಗಡಿಯೊಳಗಿದ್ದ ೩ ಫ್ರಿಡ್ಜ್, ೨ ಕಂಪ್ಯೂಟರ್, ಸಿಸಿಟಿವಿ, ಹಾಗೂ ನೂರಾರು ಬೆಲೆಬಾಳುವ ಹೊಸ ಮೊಬೈಲ್ ಫೋನ್ಗಳಿಗೆ ಹಾನಿಯಾಗಿದೆ. ಅಂದಾಜು ೧೦ ಲಕ್ಷದಷ್ಟು ನಷ್ಟವಾಗಿದೆ ಜೀವ ಬೆದರಿಕೆಯನ್ನು ಸಹ ಹಾಕಿರುತ್ತಾರೆ. . ಈ ರೀತಿ ಮುಂದೆ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ಭಯಾನಕ ಪರಿಸ್ಥಿತಿ ನಿರ್ಮಾಣವಾಗದಂತೆ ಸಂಬAಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ .ಈ ಕುರಿತು ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment